Saturday, August 8, 2026
Homeಜಿಲ್ಲಾಸುದ್ದಿಬೇಲೂರು: ಕರ್ತವ್ಯ ಲೋಪ ಹಿನ್ನೆಲೆ : BEO ರಾಜೇಗೌಡ ಅಮಾನತು!

ಬೇಲೂರು: ಕರ್ತವ್ಯ ಲೋಪ ಹಿನ್ನೆಲೆ : BEO ರಾಜೇಗೌಡ ಅಮಾನತು!

Telegram Group
Join Now

ಹಾಸನ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ BEO ರಾಜೇಗೌಡ ಅವರನ್ನು ಅಮಾನತು ಮಾಡಲು ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಲಾಗಿದೆ.

ಹೌದು .. ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿದ್ದ ರಾಜೇಗೌಡ. ಅವರು ಮೇಲೆ ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿ ಹಲವು ಆರೋಪಗಳು ಮೇಲ್ನೋಟಕ್ಕೆ ಸಾಬೀತು ಆದ ಹಿನ್ನೆಲೆಯಲ್ಲಿ ಹಾಸನ ಡಿಡಿಪಿಐ ವರದಿಯಂತೆ ಅಮಾನತು ಮಾಡಲಾಗಿದೆ.

ಇತ್ತೀಚೆಗೆ ಹೆಚ್.ಕೆ ಸುರೇಶ್ ಜೊತೆಗೆ ವಾಗ್ವಾದ ನಡೆಸಿದ್ದ ಬಿಇಓ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಸಕರ ಜೊತೆ ಕೂಡ ವಾಗ್ವಾದ ನಡೆಸಿದ್ದರು. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಿದ್ದಕ್ಕೆ ಆಕ್ಷೇಪಿಸಿದ್ದ ಶಾಸಕ ಈ ವೇಳೆ ಶಾಸಕರ ಜೊತೆ ವೇದಿಕೆಯಲ್ಲೇ ಜಟಾಪಟಿ ನಡೆಸಿದ ಆರೋಪ ಕೂಡ ಇವರ ಮೇಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments