ಚಿಕ್ಕಮಗಳೂರು: ಅಕ್ರಮವಾಗಿ ಬಿದಿರು ಕಡಿದು ಸಾಗಿಸಲು ಯತ್ನಿಸಿದ್ದ ಪ್ರಕರಣ ಬಯಲಿಗೆ ಬಂದಿದ್ದು ಉದ್ದೇ ಬೋರನಹಳ್ಳಿ ಶಾಖೆ ಹಿರೇಬಿದರೆ ವ್ಯಾಪ್ತಿಯ ಕಾಮನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಬಿದಿರು ಕಡಿತ ಹಾಗೂ ಸಾಗಾಣಿಕೆ ಪ್ರಕರಣ ಖಚಿತ ಮಾಹಿತಿ ಆದರಿಸಿ ಉಪವಲಯ ಅರಣ್ಯಾಧಿಕಾರಿ ನಾರಾಯಣ್ ಅವರ ನೇತೃತ್ವದಲ್ಲಿ ನಡೆಸಿದ್ದು ಕರಿಸಿದ್ದನಹಳ್ಳಿ ಗ್ರಾಮದ ಬಳಿದು ಪರಿಶೀಲಿಸಿದಾಗ ಹಸಿರು ಬಿದಿರು ಸಾಗಿಸುತ್ತಿದ್ದು ಇಬ್ಬರ ಆರೋಪಿಗಳನ್ನ ಬಂಧಿಸಲಾಗಿದೆ.
ಪ್ರಕರಣದಲ್ಲಿ ಹಿರೇಬಿದರೆ ಗ್ರಾಮದ ಪ್ರಸನ್ನ ಮತ್ತು ಮದನ್ ಎಂಬುವರನ್ನು ವಶಕ್ಕೆ ಪಡೆದು ಅರಣ್ಯ ಮೊಕದ್ದಮೆ ದಾಖಲಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಎಸಿ ಮೋಹನ್ ಹಾಗೂ ವಲಯ ಅರಣ್ಯ ಅಧಿಕಾರಿ ತನುಶ್ ಕುಮಾರ್ ಅವರ ಮಾರ್ಗದರ್ಶನ ನಡೆಸಲಾಗಿದ್ದು ಸಿಬ್ಬಂದಿಗಳಾದ ಅಶೋಕ್ ನವೀನ್ ಕೂಡ ಭಾಗಿಯಾಗಿದ್ದರು
