Thursday, March 26, 2026
Homeಜಿಲ್ಲಾಸುದ್ದಿಎನ್‌ ಆರ್‌ ಪುರ: ಕಾಡಾನೆಗಳ ಹಾವಳಿ: ಅಡಿಕೆ, ಕಾಫಿ ಸೇರಿದಂತೆ ಹಲವು ಬೆಳೆಗಳು ನಾಶ!

ಎನ್‌ ಆರ್‌ ಪುರ: ಕಾಡಾನೆಗಳ ಹಾವಳಿ: ಅಡಿಕೆ, ಕಾಫಿ ಸೇರಿದಂತೆ ಹಲವು ಬೆಳೆಗಳು ನಾಶ!

ಎನ್‌ ಆರ್‌ ಪುರ: ಮಲೆನಾಡಿನಲ್ಲಿ ದಿನೇ ದಿನೇ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದು ಇದರಿಂದ ಜನ ರೋಸಿ ಹೋಗಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಎನ್‌ ಆರ್‌ ಪುರ ತಾಲೂಕಿನ ಮೋರಿಮಠ ಗ್ರಾಮದಲ್ಲಿ ಕಾಡಾನೆಗಳ ಗುಂಪು ದಾಳಿ ನಡೆಸಿ ಬಾಳೆ ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನ ನಾಶ ಮಾಡಿದೆ.

ಹೌದು .. ಕಾಡಾನೆಗಳನ್ನ ಕೂಡಲೇ ಕಾಡಿಗೆ ಅಟುವ ಕೆಲಸ ಕೈಗೊಳ್ಳಿ ಇಲ್ಲವಾದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಕಾಡಾನೆಗಳಿಗಾಗಿ ಸೌರ ಬೇಲಿ, ಪಟಾಕಿ ಸದ್ದು ಸೇರಿದಂತೆ ಹಲವು ಕ್ರಮಗಳನ್ನ ಕೈಗೊಳ್ಳಬೆಕೇಂದು ರೈತರು ಆಗ್ರಹಿಸಿದ್ದಾರೆ.

ಹಾಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳಿಂದ ನಷ್ಟವಾದ ಬೆಳೆಗಳಿಗೆ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!