ಎನ್ ಆರ್ ಪುರ: ರಬ್ಬರ್ ಅಂಗಡಿಯಲ್ಲಿ ಯಾರು ಇಲ್ಲದಾಗ ಅಂಗಡಿಗೆ ನುಗ್ಗಿ ಹಣ ದೋಚಿ ಪರಾರಿಯಾದ ಘಟನೆ ಎನ್ ಆರ್ ಪುರ ಟೌನ್ ನಲ್ಲಿ ನಡೆದಿದೆ.
ಹೌದು .. ಅಂಗಡಿಯಲ್ಲಿ ಯಾರು ಇಲ್ಲದಾಗ ಅಂಗಡಿಗೆ ನುಗ್ಗಿ ಹಣ ದೋಚಿ ಪರಾರಿಯಾಗಿರುವ ದೃಶ್ಯ ಹಾಗೂ ಕಳ್ಳನ ಕೈ ಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಎನ್ ಆರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು.
ಶೃಂಗೇರಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ನಾಳೆ ವಿದ್ಯುತ್ ನಿಲುಗಡೆಯಾಗಲಿದೆ.
20.11.2025ರ ಗುರುವಾರ ದಂದು ಬೆಳಿಗ್ಗೆ 09 ಗಂಟೆ ಯಿಂದ ಸಂಜೆ 6 ಗಂಟೆಯವರೆಗೆ ಬಾಳೆಹೊನ್ನೂರು – ಶೃಂಗೇರಿ 33/11 ಕೆವಿ ಮಾರ್ಗದಲ್ಲಿ 2025-26 ನೇ ಸಾಲಿನ ಮಾರ್ಗ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಶೃಂಗೇರಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
