ಕೊಪ್ಪ: ಕಾಫಿ ತೋಟದಲ್ಲಿ ಹಸುವನ್ನು ಕದ್ದು ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು .. ಅಸ್ಸಾಂ ಮೂಲದ ಅನ್ವರ್ ಅಲಿ, ಐನಲ್ಹಕ್, ಮುಜಾಮಿಲ್ ಬಂಧಿತ ಆರೋಪಿಗಳು.ವಲಸೆ ಕಾರ್ಮಿಕರಿಂದ ಗೋ ಹತ್ಯೆ ನಡೆದಿರಿವ ಶಂಕೆ ಹಾಗೆ ಮಾಂಸ ಮಾಡಿ ತಲೆ ಚರ್ಮ ಹೂತು ಹಾಕಿರುವ ದುರ್ಷ್ಕರ್ಮಿಗಳು
ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ಟೇಟ್ ಒಂದರ ಕಾಫಿ ತೋಟದಲ್ಲಿ ಭಾನುವಾರ ಸಂಜೆ ಗೋಹತ್ಯೆ ನಡೆದಿರುವ ಮಾಹಿತಿ ಪಡೆದ ಬಾಳೆಹೊನ್ನೂರು ಪೊಲೀಸರು, ಎಸ್ಐ ರವೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ದನದ ಮಾಂಸವನ್ನ ವಶಪಡಿಸಿಕೊಂಡಿದ್ದಾರೆ.
