ಕೊಪ್ಪ: ತಾಲ್ಲೂಕನ್ನು ಪ್ರತಿನಿಧಿಸಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು ಶಾಲೆಯ ವಿದ್ಯಾರ್ಥಿ ವಿಘ್ನೇಶ್ ಆರ್ ನಾಯ್ಕ್
ಕಡೂರಿನ ಗಿರಿಯಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಪ್ಪ ತಾಲ್ಲೂಕನ್ನು ಪ್ರತಿನಿಧಿಸಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ತನ್ನ ಅದ್ಬುತವಾದ ಕೈಬರಹದಿಂದ ಎಲ್ಲರ ಮನ ಗೆದ್ದು ಶಾಲೆಯ, ಗ್ರಾಮದ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿ ವಿಘ್ನೇಶ್ ಆರ್ ಇವರಿಗೆ ಶಾಲಾ ಎಸ್.ಡಿ.ಎಂ.ಸಿ, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರಾದ ಮುತ್ತೂರು ರಾಜೇಶ್, ಅಜಿತ್ ಯು, ರೀಟಾ ಡಿ ಸೋಜಾ, ಸ್ವಾತಿ ಹಾಗೂ ಸುನೀತ ರವರು ಅಭಿನಂದಿಸಿದ್ದಾರೆ.
