Friday, June 26, 2026
Homeಕ್ರೈಮ್ಜಯಪುರ: ಕೊಗ್ರೆ ಭಾಗದಲ್ಲಿ ಮತ್ತೆ ಸುರಿದ ಭಾರೀ ಮಳೆ: ರಸ್ತೆ ಮಧ್ಯೆ ಬಿದ್ದ ಮರ, ಕೆಲಕಾಲ...

ಜಯಪುರ: ಕೊಗ್ರೆ ಭಾಗದಲ್ಲಿ ಮತ್ತೆ ಸುರಿದ ಭಾರೀ ಮಳೆ: ರಸ್ತೆ ಮಧ್ಯೆ ಬಿದ್ದ ಮರ, ಕೆಲಕಾಲ ಸಂಚಾರ ಸ್ಥಗಿತ!

ಜಯಪುರ: ಕೊಪ್ಪ ತಾಲೂಕಿನ ಕೊಗ್ರೆ ಭಾಗದಲ್ಲಿ ಸುರಿದ ಭಾರೀ ಮಳೆಗೆ ಕೊಗ್ರೆಯಿಂದ ಜಯಪುರ ಹೋಗುವ ಮಾರ್ಗ ಮಧ್ಯೆ ಮರವೊಂದು ರಸ್ತೆಗೆ ಬಿದ್ದಿರುವುರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಶೃಂಗೇರಿಯಿಂದ ಹೊರನಾಡು ಹೋಗುವ ಮುಖ್ಯರಸ್ತೆಯೂ ಆಗಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಶೃಂಗೇರಿ–ಕೊಪ್ಪ ಮಾರ್ಗದ ಗುಡ್ಡೆತೋಟದ ಸಮೀಪ ಮರ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಾಹನಗಳು ರಸ್ತೆ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದವು. ಸ್ಥಳೀಯರು ಮತ್ತು ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ಹಾಗೆ  ಜಯಪುರ, ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭಾರೀ ಮಳೆ ಸುರಿಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments