ಚಿಕ್ಕಮಗಳೂರು: ಕಾಫಿನಾಡಲ್ಲಿ ನಾಗಲ್ಯಾಂಡ್ ಮೂಲದ ಯುವತಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಅರವಿಂದ ನಗರದಲ್ಲಿ ನಡೆದಿದೆ.
ಹೌದು .. 22 ವರ್ಷದ ಲುನ್ಸುಲಾ ಮೃತ ದುರ್ದೈವಿ. ಗ್ಲೋಬಲ್ ವಿಲೇಜ್ ರೆಸಾರ್ಟ್ ನಲ್ಲಿ ಲುನ್ಸುಲಾ ಕೆಲಸ ಮಾಡುತ್ತಿದ್ದರು.

ರಾಜೇಶ್ ಹಾಗೂ ತೇಜಸ್ ಎಂಬುವವರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲುನ್ಸುಲಾಳ ಜೊತೆಗಿದ್ದ ಲಶಿಲಾ ಇಂಚುಗರ್ ಎಂಬುವರು ದೂರು ನೀಡಿದ್ದಾರೆ. ಇವರಿಬ್ಬರನ್ನ ಹೆಸರನ್ನ ಮೃತ ಲುನ್ಸುಳಾ ಡೈರಿಯಲ್ಲಿ ಬರೆದಿಡಲಾಗಿದೆ ಎಂದು ಹೇಳಲಾಗುತ್ತಿದ್ದು,
ಪ್ರಕರಣ ಸಂಬಂಧ ಬಸವನಹಳ್ಳಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
