Monday, August 4, 2025
!-- afp header code starts here -->
Homeಕ್ರೈಮ್ಪ್ರಜ್ವಲ್‌ಗೆ ಕೂಡಲೇ ಶರಣಾಗುವಂತೆ ದೇವೇಗೌಡರ ಖಡಕ್‌ ಸೂಚನೆ..!

ಪ್ರಜ್ವಲ್‌ಗೆ ಕೂಡಲೇ ಶರಣಾಗುವಂತೆ ದೇವೇಗೌಡರ ಖಡಕ್‌ ಸೂಚನೆ..!

ದೇಶಾದ್ಯಂತ ಕೋಲಾಹಲವೆಬ್ಬಿಸಿರುವ ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇತ್ತ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಎಸ್‌ಐಟಿ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ. ಪುತ್ರನ ಬಂಧನದಿಂದ ತೀವ್ರ ಮುಜುಗರಕ್ಕೊಳಗಾಗಿರುವ ದೇವೇಗೌಡರು ಇದೀಗ ಪ್ರಜ್ವಲ್‌ ರೇವಣ್ಣನಿಗೆ ಕೂಡಲೇ ಬಂದು ಪೊಲೀಸರಿಗೆ ಶರಣಾಗುವಂತೆ ಖಡಕ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ದೇವೇಗೌಡರ ಸೂಚನೆ ಮೇರೆಗೆ ಬೆಂಗಳೂರಿಗೆ ನಾಳೆ ಅಥವಾ ನಾಡಿದ್ದು ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ರೇವಣ್ಣ ಬಂಧನವಾಗಿದೆ. ಇನ್ನೂ ಪ್ರಜ್ವಲ್ ಹೀಗೆ ತಲೆಮರೆಸಿಕೊಂಡಿದ್ರೆ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ. ಹೀಗಾಗಿ ಇನ್ನಷ್ಟು ಮುಜುಗರ ತಪ್ಪಿಸಲು ಶರಣಾಗೋದೆ ಸೂಕ್ತ ಎಂದು ದೇವೇಗೌಡರು ಮೊಮ್ಮಗನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅಜ್ಜನ ಸೂಚನೆಯಂತೆ ಪ್ರಜ್ವಲ್‌ ಇನ್ನೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!