ಶಿವಮೊಗ್ಗ: ನಾಳೆ ನಡೆಯಲಿರುವ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸಿದ್ದತೆ ವೇಳೆ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಾಬಳ್ಳಿ ಬಳಿ ನಡೆದಿದೆ.

ಜಾತ್ರೆ ಹಿನ್ನೆಲೆ ಗಂಗೆ ಪೂಜೆ ಮಾಡಲು ಹೊರಡುವ ವೇಳೆ ಈ ಅನಾಹುತ ನಡೆದಿದ. ಪೊದೆಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ದಾಳಿ ನಡೆಸಿದ್ದು, ಇದ್ರಿಂದ ಗಾಯಗೊಂಡವರಿಗೆ ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಹೆಜ್ಜೇನು ದಾಳಿ ವೇಳೆ ಎರಡು ವರ್ಷದ ಮಗುವನ್ನು 12 ವರ್ಷದ ಬಾಲಕನೊಬ್ಬ ರಕ್ಷಣೆ ಮಾಡಿದ ದೃಶ್ಯವೂ ಕಂಡುಬಂತು. ಗಗನ್ ಎಂಬ ಬಾಲಕ 10 ಕ್ಕೂ ಹೆಚ್ಚು ಹೆಜ್ಜೇನು ಕಚ್ಚಿಸಿಕೊಂಡರೂ ಸಹ ಎರಡು ವರ್ಷದ ಬಾಲಕನನ್ನ ರಕ್ಷಣೆ ಮಾಡಿದ್ದಾನೆ.
