ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ದಾಳಿ ನಡೆಸಿ ಅಕ್ರಮ ತಡೆಗೆ ಕ್ರಮ ಕೈಗೊಂಡಿದ್ರು. ಅದಾದ ನಾಲ್ಕು ದಿನಕ್ಕೆ ಫೋಟೋ ತೆಗೆಯೋದಕ್ಕೆ ಮೊಬೈಲ್ ಎಲ್ಲಿಂದ ಬಂತು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಜೈಲಲ್ಲಿ ರಾಜಾರೋಷವಾಗಿ ಕಾಫಿ, ತಿಂಡಿ ಕೊಡಲಾಗ್ತಿದೆ. ಇದಕ್ಕೆಲ್ಲ ಸರ್ಕಾರ ಉತ್ತರ ಕೊಡಬೇಕು. ಜೈಲುಗಳಲ್ಲಿ ಮಾದಕ ವಸ್ತುಗಳನ್ನ ನೀಡಲಾಗ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಉಳಿಯುತ್ತೋ, ಹೋಗುತ್ತೋ ಅನ್ನುವುದರಲ್ಲೇ ಎಲ್ಲಾಆ ಮಂತ್ರಿಗಳು ಕಾಲ ಕಳೆಯುತ್ತಿದ್ದಾರೆಂದು ಆರೋಪಿಸಿದರು.
