ಬೆಂಗಳೂರು : ಮನೆ ಕೆಲಸದಾಕೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣ ಸಂಬಂಧ ಶಾಸಕ ಹೆಚ್.ಡಿ. ರೇವಣ್ಣಗೆ ಹೈಕೋರ್ಟ್ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.
ರೇವಣ್ಣಗೆ ನೀಡಲಾಗಿದ್ದ ಜಾಮೀನು ರದ್ದತಿ ಕೋರಿ ಎಸ್ಐಟಿ ಹೈಕೋರ್ಟ್ಗೆ ಸಲ್ಲಿಸಿದ್ದ ರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬುಧವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಎಸ್ಐಟಿ ಅರ್ಜಿ ವಜಾ ಮಾಡಿ, ರೇವಣ್ಣಗೆ ಜಾಮೀನು ಮಂಜೂರು ಮಾಡಿದೆ. ರೇವಣ್ಣ ಜತೆ ಉಳಿದ ಆರೋಪಿಗಳಾದ ಸತೀಶ್ ಬಾನು, ಮಧುಗೌಡ, ಕೆ.ಎ. ರಾಜಗೋಪಾಲ, ಹೆಚ್.ಕೆ. ಸುಜಯ್, ಹೆಚ್. ಎನ್. ಮಧು, ಎಸ್.ಟಿ. ಕೀರ್ತಿ ಅವರಿಗೂ ನ್ಯಾಯಾಲಯ ಜಾಮೀನು



