Tuesday, August 11, 2026
Homeಕ್ರೈಮ್ಹುಡುಗಿ ನನ್‌ ಪ್ರೀತಿ ಸ್ವೀಕರಿಸ್ತಿಲ್ಲ - ಸಾಲನೂ ತೀರಿಸೋದಕ್ಕಾಗ್ತಿಲ್ಲ : ಡೆತ್‌ ನೋಟ್‌ ಬರೆದಿಟ್ಟು ಯುವಕ...

ಹುಡುಗಿ ನನ್‌ ಪ್ರೀತಿ ಸ್ವೀಕರಿಸ್ತಿಲ್ಲ – ಸಾಲನೂ ತೀರಿಸೋದಕ್ಕಾಗ್ತಿಲ್ಲ : ಡೆತ್‌ ನೋಟ್‌ ಬರೆದಿಟ್ಟು ಯುವಕ ನಾಪತ್ತೆ..!

Telegram Group
Join Now

ಶಿವಮೊಗ್ಗ : ಆನ್‌ಲೈನ್ ಟ್ರೆಡೀಂಗ್ ಇನ್ವೆಸ್ಟ್‌ ಮಾಡಿ ಹಣ ಕಳೆದುಕೊಂಡ ಯುವಕ ನಾಪತ್ತೆಯಾಗಿರುವ ಪ್ರಕರಣ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯಲ್ಲಿ ನಡೆದಿದೆ.
ಜಯದೀಪ್ ನಾಪತ್ತೆಯಾದ ಯುವಕ. ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ತುಂಗಾ ನದಿಯ ಕುರುವಳ್ಳಿ ಸೇತುವೆ ಬಳಿ ಬೈಕ್ ಪತ್ತೆಯಾಗಿದೆ. ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಡೆತ್ ನೋಟ್ ಹಾಕಿದ್ದು, ಹುಡುಗಿ ಪ್ರೀತಿ ನಿರಾಕರಣೆ ಹಿನ್ನೆಲೆ ಅಂತ ಬರೆದಿದ್ದಾನೆ.
ಅಪ್ಪ, ಅಮ್ಮ, ಸಂಜಯ್ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾನೆ. ಸ್ನೇಹಿತರು ಹಾಗೂ ಸಂಬಂಧಿಕರ ಬಳಿ 90 ಸಾವಿರ ಸಾಲ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments