ಮೂಡಿಗೆರೆ: ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ನೂತನ ಅಧ್ಯಕ್ಷ ರಾಗಿ ಅನುಕುಮಾರ್ (ಪುಟ್ಟಣ್ಣ) ಪುನರಾಯ್ಕೆ ಮುಂದಿನ ಎರಡು ವರ್ಷಗಳ ಕಾಲ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಗುರುವಾರ ಮೂಡಿಗೆರೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾಗಣಪತಿ ಸೇವಾ ಸಮಿತಿ ಪೂರ್ವ ಭಾವಿ ಸಭೆ ನಡೆದಿದ್ದು ಈ ಸಭೆಯಲ್ಲಿ ಸಾರ್ವಜನಿಕರ ಒಮ್ಮತದಿಂದ ಅನುಕುಮಾರ್ ಅವರನ್ನು ಪುನಾರಾಯ್ಕೆ ಮಾಡಲಾಯಿತು.
