Sunday, July 5, 2026
Homeಕ್ರೈಮ್ಸಕಲೇಶಪುರ: ಒಂದನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ ಆರೋಪ

ಸಕಲೇಶಪುರ: ಒಂದನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ ಆರೋಪ

Telegram Group
Join Now

ಸಕಲೇಶಪುರ: ಬಾಳ್ಳುಪೇಟೆ ಗ್ರಾಮದಲ್ಲಿರುವ ಖಾಸಗಿ ಬ್ಲಾಸಂ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ದಿವಾಕರ್‌ಗೌಡ ಎಂಬ ಬಾಲಕನಿಗೆ ಶಿಕ್ಷಕಿ ಥಳಿಸಿರುವ ಘಟನೆ ನಡೆದಿದೆ.

ಮಡಬಲು ಗ್ರಾಮದ ಕೂಲಿ ಕೆಲಸ ಮಾಡುವ ರಂಗಸ್ವಾಮಿ–ಕಾವ್ಯ ದಂಪತಿಯ ಪುತ್ರನಾದ ದಿವಾಕರ್‌ಗೌಡನನ್ನು, ಬಾಸುಂಡೆ ತರಲು ಮನಸ್ಸೋಯಿಸದ ಕಾರಣಕ್ಕಾಗಿ ಶಿಕ್ಷಕಿ ರಜನಿ ಥಳಿಸಿದ್ದಾಗಿ ಪೋಷಕರು ಆರೋಪಿಸುತ್ತಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಈ ರೀತಿ ವರ್ತಿಸಿದ್ದಾಗಿ ಮಕ್ಕಳ ಪೋಷಕರು ದೂರಿದ್ದಾರೆ. ಥಳಿತದಿಂದ ಗಾಯಗೊಂಡ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments