ಚಿಕ್ಕಮಗಳೂರು: ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ 750 ಗ್ರಾಂ ಚಿನ್ನ ಹಾಗೂ 6 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕೊಪ್ಪ ಪಟ್ಟಣದ ಹೊರವಲಯದಲ್ಲಿರುವ ಮಣಿಪುರದ ತಮ್ಮ ನಿವಾಸದಲ್ಲಿ ನಡೆದಿದೆ.
ಹೌದು .. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಪುತ್ರ ಇರುವ ಹೆಚ್.ಜಿ.ವೆಂಕಟೇಶ್ ಅವರ ನಿವಾಸದಲ್ಲಿ ಇಂದು ಬೆಳಗ್ಗೆ (ಆಗಸ್ಟ್ 21) ಸುಮಾರು 1:30 ರಿಂದ 3:00 ಘಂಟೆಯ ಸುಮಾರಿಗೆ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳುವು ಮಾಡಲಾಗಿದೆ.
ಕಳೆದೆರಡು ವಾರಗಳ ಕೆಳಗೆ ಬೇರೆ ಊರಿನಿಂದ ಬಂದ ದಂಪತಿಗಳು ಕೆಲಸಕ್ಕೆ ಸೇರಿದ್ದರು. ಈ ದಂಪತಿಗಳೇ ಕಳ್ಳತನದ ಕೃತ್ಯ ಎಸಗಿ ಪರಾರಿಯಾಗಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು ದಯಮಾಡಿ ಇವರುಗಳು ಎಲ್ಲೇ ಕಂಡರೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ.
ವರದಿ: ವಿಠ್ಠಲ್ ಶೃಂಗೇರಿ
