Friday, February 13, 2026
Homebig breakingರೇಣುಕಾಸ್ವಾಮಿ ಕೊಲೆ ಪ್ರಕರಣ - ಆ.31ಕ್ಕೆ ಜಾಮೀನು ಭವಿಷ್ಯ..!

ರೇಣುಕಾಸ್ವಾಮಿ ಕೊಲೆ ಪ್ರಕರಣ – ಆ.31ಕ್ಕೆ ಜಾಮೀನು ಭವಿಷ್ಯ..!

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಪವಿತ್ರ ಗೌಡ ಹಾಗೂ ಇತರೆ ಮೂವರ ಜಾಮೀನು ಅರ್ಜಿ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಪವಿತ್ರಾ ಗೌಡ, ಅನುಕುಮಾರ್ ಕುರಿತ ಆದೇಶ ಆಗಸ್ಟ್‌ 31ಕ್ಕೆ ಹೊರಬರಲಿದೆ. ವಿನಯ್‌, ಕೇಶವಮೂರ್ತಿ ಜಾಮೀನು ಅರ್ಜಿಯ ಆದೇಶ ಸೆ.2ಕ್ಕೆ ಪ್ರಕಟವಾಗಲಿದೆ. ಕೊಲೆ ಪ್ರಕರಣದ 17 ಆರೋಪಿಗಳಲ್ಲಿ ನಾಲ್ವರು ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಪರ ವಕೀಲ ಸೆಬಾಸ್ಟಿನ್‌ ವಾದ ಮಂಡಿಸಿದ್ದರೆ, ಜಾಮೀನು ನೀಡದಂತೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್‌ ವಾದ ಮಂಡಿಸಿದ್ದರು. ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!