ಬಳ್ಳಾರಿ : ಪರಪ್ಪನ ಅಗ್ರಹಾರದ ಐಶಾರಾಮಿ ಜೀವನ ಬಹಿರಂಗಗೊಂಡ ಬಳಿಕ ದರ್ಶನ್ & ಗ್ಯಾಂಗ್ ಅನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರಮುಖ ಆರೋಪಿಯಾಗಿರುವ ದರ್ಶನ್ನನ್ನು ಬಳ್ಳಾರಿ ಸೆಂಟ್ರಲ್ ಜೈಲ್ಗೆ ಶಿಫ್ಟ್ ಮಾಡಲಾಗ್ತಿದೆ.
ಆದ್ರೆ ಬಳ್ಳಾರಿ ಜೈಲ್ ಕೂಡಾ ಪರಪ್ಪನ ಅಗ್ರಹಾರಕ್ಕಿಂತ ಭಿನ್ನವಾಗಿಲ್ಲ ಅನ್ನುವ ಆರೋಪ ಕೇಳಿಬಂದಿದೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಂದ ಜಯಸಿಂಹ ಎಂಬಾತ, ಬಳ್ಳಾರಿ ಜೈಲಲ್ಲಿ ಗಾಂಜಾ, ಗುಟ್ಕಾ, ಸಿಗರೇಟ್, ಮೊಬೈಲ್ ಎಲ್ಲಾ ಸಿಗುತ್ತೆ. ಹಣ ಕೊಟ್ಟರೆ ಅಲ್ಲಿನವರು ಎಲ್ಲವನ್ನೂ ಒದಗಿಸುತ್ತಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಜಯಸಿಂಹ ಕೊಲೆ ಪ್ರಕರಣದಲ್ಲಿ 9 ವರ್ಷ ಶಿಕ್ಷೆ ಅನುಭವಿಸಿ ಹೊರಬಂದಿದ್ದಾರೆ.
ಬಳ್ಳಾರಿ ಜೈಲಲ್ಲೂ ಸಿಗುತ್ತಂತೆ ಗಾಂಜಾ, ಸಿಗರೇಟ್, ಮೊಬೈಲ್..!
RELATED ARTICLES
