ಮೂಡಿಗೆರೆ: ತಾಲೂಕಿನ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾರು ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಮಂಜುನಾಥ್ ಲೋಕುವಳ್ಳಿ (38)ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಇಂದು ಸಂಜೆ ಕಡೂರು -ಮಂಗಳೂರು ರಸ್ತೆಯ ಹ್ಯಾಂಡಪೋಸ್ಟ್ ಬಳಿ ಘಟನೆ ಸಂಭವಿಸಿದ್ದು ರಸ್ತೆಯಲ್ಲಿದ್ದ ಗುಂಡಿಗೆ ಆಟೋ ಹೋಗಿದ್ದು ಚಾಲಕ ಆಟೋದಿಂದ ಹಾರಿದ ಪರಿಣಾಮ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಕಾರು ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸಂಬಧಿಕರದ್ದು ಎಂಬುದಾಗಿ ತಿಳಿದು ಬಂದಿದೆ
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
