Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಎನ್.‌ ಆರ್‌.ಪುರದಲ್ಲಿ ಹೃದಯಾಘಾತಕ್ಕೆ ಕಾಲೇಜು ಉಪನ್ಯಾಸಕ ನಿಧನ!

ಎನ್.‌ ಆರ್‌.ಪುರದಲ್ಲಿ ಹೃದಯಾಘಾತಕ್ಕೆ ಕಾಲೇಜು ಉಪನ್ಯಾಸಕ ನಿಧನ!

ನರಸಿಂಹರಾಜಪುರ: ಹಾಸನ ಆಯ್ತು ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸರಣಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಕೊಪ್ಪ, ಎನ್.ಆರ್.ಪುರದಲ್ಲಿ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದವರು ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ.

ಎನ್ ಆರ್ ಪುರ ತಾಲೂಕಿನ ಕಾನೂರು ನಿವಾಸಿ ಅರವಿಂದ್ (38) ಮೃತಪಟ್ಟಿರುವ ಉಪನ್ಯಾಸಕ. ಸುಮಾರು 13 ವರ್ಷದಿಂದ ಕೊಪ್ಪದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಎನ್ ಆರ್ ಪುರದ ಮೌಂಟ್ ಕಾರ್ಮಲ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಅರವಿಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅರವಿಂದ್ ಕೊಪ್ಪದಲ್ಲಿ ಬಿ. ಕಾಂ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ. ಕಾಂ ಪದವಿ ಪಡೆದಿದ್ದರು. ಉಪನ್ಯಾಸಕ ಅರವಿಂದ್ ಸಾವಿಗೆ ಸಹೋದ್ಯೋಗಿಗಳು, ವಿದ್ಯಾರ್ಥಿ ವೃಂದ ಕಂಬನಿ ಮಿಡಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!