Advertisement

Homeಜಿಲ್ಲಾಸುದ್ದಿಹಾಸನದಲ್ಲಿ ಹೆಜ್ಜೇನು ದಾಳಿಗೆ ಯುವಕ ಬಲಿ!

ಹಾಸನದಲ್ಲಿ ಹೆಜ್ಜೇನು ದಾಳಿಗೆ ಯುವಕ ಬಲಿ!

ಹಾಸನ: ಹೆಜ್ಜೇನು ದಾಳಿಗೆ ಯುವಕ ಬಲಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬಾಣನಕೆರೆ ಗ್ರಾಮದಲ್ಲಿ ನಡೆದಿದೆ.

ತಂದೆ ಜೊತೆ ಜಮೀನಿಗೆ‌ ತೆರಳಿದ್ದ ವೇಳೆ ಏಕಾ ಏಕಿ ಹೆಜ್ಜೇನು ದಾಳಿಯಲ್ಲಿ ಬಿ.ಕೆ. ಚರಣ್(30) ಸಾವನ್ನಪ್ಪಿದ್ದು ಅವರ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಣಕೆರೆ ಗ್ರಾಮದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕುಮಾರಣ್ಣ ತಮ್ಮ ಪುತ್ರ ಬಿ.ಕೆ. ಚರಣ್ ಅವರೊಂದಿಗೆ ಸೋಮವಾರ ಮಧ್ಯಾಹ್ನ ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಹೆಜ್ಜೇನು ದಾಳಿ ಮಾಡಿದ್ದು ಸ್ಥಳೀಯರ ಸಹಾಯದಿಂದ ತಂದೆ ಮಗನನ್ನು ಬೆಳ್ಳೂರು ಕ್ರಾಸ್‌ ಬಳಿ ಇರುವ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ದುರಾದೃಷ್ಟವಶಾತ್‌ ಚಿಕಿತ್ಸೆ ಫಲಕಾರಿಯಾಗದೆ ಚರಣ್‌ ಮೃತಪಟ್ಟಿದ್ದು ಸದ್ಯ ತಂದೆ ಕುಮಾರಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!