Thursday, February 12, 2026
Homeಜಿಲ್ಲಾಸುದ್ದಿಅರಕಲಗೂಡು: ಗಣಪತಿ ವಿಸರ್ಜನೆ ವೇಳೆ ಕುಣಿದು ಹೃದಯಾಘಾತದಿಂದ ಯುವಕ ಸಾವು

ಅರಕಲಗೂಡು: ಗಣಪತಿ ವಿಸರ್ಜನೆ ವೇಳೆ ಕುಣಿದು ಹೃದಯಾಘಾತದಿಂದ ಯುವಕ ಸಾವು

ಹಾಸನ: ಗಣಪತಿ ವಿಸರ್ಜನೆ ವೇಳೆ ಕುಣಿದ ಮಂಜುನಾಥ್ ಅದಾದ 30ನಿಮಿಷದ ನಂತರ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ .

ಹೌದು .. ಭಾನುವಾರ ಸಂಜೆ 4.10 ನಿಮಿಷದ ಆಸುಪಾಸಿನಲ್ಲಿ ತಮಟೆ ಬಡಿದ ಕೇಳಿ ಕೇಳಿ ಕುಣಿಯುತ್ತಿದ್ದ ಮಂಜುನಾಥ್ , 4.42 ರ ಸುಮಾರಿಗೆ ಹೃದಯಾಘಾತದಿಂದ ತನ್ನ ಪ್ರಾಣ ಬಿಟ್ಟಿದ್ದಾನೆ .

ಮೃತ ಮಂಜುನಾಥ್ ಗ್ರಾಮದ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತಿದ್ದ. ಈ ಮೊದಲೇ ಹೃದಯ ಸಂಬಂಧಿಸಿದ ಕಾಯಿಲೆ ಇತ್ತು ಎನ್ನಲಾಗಿದ್ದು ,  ದುರದೃಷ್ಟವಶಾತ್ ಸಣ್ಣ ಪ್ರಾಯದಲ್ಲೇ ಅಸುನೀಗಿದ್ದಾನೆ . ಕುಟುಂಬಕ್ಕೆ ಗ್ರಾಮಸ್ಥರು ಧೈರ್ಯ ತುಂಬಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!