ಚಿಕ್ಕಮಗಳೂರು : ನಾಡಕಚೇರಿಗೆ ಬೀಗ ಹಾಕಿ 77ನೇ ಗಣರಾಜ್ಯೋತ್ಸವ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಂಡುಬಂದಿದೆ.
ಹೌದು .. ತಾತ್ಕಾಲಿಕವಾಗಿ ಬಾಳೆಹೊನ್ನೂರಿನ ಪ್ರಾಥಮಿಕ ಶಾಲಾ ಕಟ್ಟಡದಲ್ಲಿರುವ ನಾಡಕಚೇರಿ ಈಗ ಹೊಸ ನಾಡಕಚೇರಿ ಪ್ರಾರಂಭವಾಗಿದ್ದು, ಗಣರಾಜ್ಯೋತ್ಸವ ಆಚರಿಸದ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಹಳೆಯದ್ದು-ಹೊಸದು ಎರಡರಲ್ಲಿ ಎಲ್ಲೂ ಧ್ವಜಾರೋಹಣ ಮಾಡದ ಅಧಿಕಾರಿಗಳು ಹಾಗಾಗಿ ಈ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಇವರನ್ನು ಮೇಲಾಧಿಕಾರಿಗಳು ತರಾಟೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
