Monday, February 9, 2026
Homeಜಿಲ್ಲಾಸುದ್ದಿಬೇಲೂರು: ಚನ್ನಕೇಶವ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ: ಎರಡು ವಿದೇಶಿ ಹಣ ಸೇರಿ ಚಿನ್ನ,...

ಬೇಲೂರು: ಚನ್ನಕೇಶವ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ: ಎರಡು ವಿದೇಶಿ ಹಣ ಸೇರಿ ಚಿನ್ನ, ಬೆಳ್ಳಿಗಳು!

ಬೇಲೂರು: ತಾಲೂಕಿನ ಶ್ರೀ ಚನ್ನಕೇಶವ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ಮುಗಿದಿದ್ದು ಈ ಬಾರಿ 37,79,346 ರೂ.ಗಳು .ಬಂದಿದ್ದು ಎರಡು ವಿದೇಶಿ ಹಣ ಹಾಗು ಚಿನ್ನ ಬೆಳ್ಳಿ ವಸ್ತುಗಳು ಕೂಡ ಈ ಬಾರಿ ಬಂದಿದೆ ಎಂದು ಮುಜರಾಯಿ ತಹಶೀಲ್ದಾರ್ ಶ್ರೀಮತಿ ಲತಾ‌ ಅವರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಹುಂಡಿ ಹಣವನ್ನು ಏಣಿಕೆ ಸಂದರ್ಭದಲ್ಲಿ 11-6-2025 ರಂದು 36, 41,823 ರೂಗಳು ಬಂದಿತ್ತು . ಈ ಹಣವನ್ನು ದೇವಾಲಯದ ಅಭಿವೃದ್ಧಿ ಗೆ ಹಾಗು ನೌಕರರ ವೇತನಕ್ಕೆ ಬಳಸಲಾಗುತ್ತದೆ ಎಂದರು.


ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಭಕ್ತರು ಹಾಗು ಪ್ರವಾಸಿಗರು ಅವರ ಭಕ್ತಿಯ ಅನುಸಾರವಾಗಿ ಕಾಣಿಕೆ ರೂಪದಲ್ಲಿ ಬೇಲೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿ ಹಾಗು ದೇಗುಲದ ನೌಕರರ ವರ್ಗದವರು ಈ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು ದಾಸೋಹದ ಹುಂಡಿ ಸೇರಿದಂತೆ ದೇಗುಲದ ಎಲ್ಲಾ ಹುಂಡಿಗಳ ಎಣಿಕೆ ಮಾಡಲಾಗಿದೆ ಎಂದರು.


ಈ ಸಂದರ್ಭದಲ್ಲಿ ಸಕಲೇಶಪುರ ಉಪವಿಭಾಗದ ಅಧಿಕಾರಿ ರಾಜೇಶ್,ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಯೋಗೇಶ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!