Advertisement

Homeಜಿಲ್ಲಾಸುದ್ದಿಹೊಳೆನರಸೀಪುರದಲ್ಲಿ ಆಸ್ತಿಗಾಗಿ ತಂದೆ, ಅಣ್ಣನನ್ನೇ ಕೊಲೆಗೈದ ತಮ್ಮ!

ಹೊಳೆನರಸೀಪುರದಲ್ಲಿ ಆಸ್ತಿಗಾಗಿ ತಂದೆ, ಅಣ್ಣನನ್ನೇ ಕೊಲೆಗೈದ ತಮ್ಮ!

ಹಾಸನ : ತಂದೆ ಹಾಗೂ ಅಣ್ಣನನ್ನೇ ಕೊಲೆಗೈದಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ, ಗಂಗೂರು ಗ್ರಾಮದಲ್ಲಿ ನಡೆದಿದೆ. ದೇವೇಗೌಡ (70), ಮಂಜುನಾಥ್ (50) ಕೊಲೆಯಾದ ಮೃತ ದುರ್ದೈವಿಗಳು.

ಮೋಹನ್ (47) ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ಆರೋಪಿಯಾಗಿದ್ದು ಅವಿವಾಹಿತರಾಗಿದ್ದ ಮಂಜುನಾಥ್ ಹಾಗೂ ಮೋಹನ್‌ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದ ಮೋಹನ್‌ ಹಾಗೆ ತಂದೆ-ತಾಯಿ ಜೊತೆ ವಾಸವಿದ್ದ ಮಂಜುನಾಥ್

ಕುಡಿದ ಮತ್ತಿನಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆಗೈದ ಮೋಹನ್ ಆ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಅಲ್ಲಿನ ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!