Thursday, April 2, 2026
Homeಕ್ರೈಮ್ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ ಅಕ್ರಮವಾಗಿ 80 ಚೀಲ ಹೂತು ಹಾಕಿರುವ ಗೋಧಿ ಪತ್ತೆ:‌ ಅಧಿಕಾರಿಗಳ ವಿರುದ್ಧ...

ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ ಅಕ್ರಮವಾಗಿ 80 ಚೀಲ ಹೂತು ಹಾಕಿರುವ ಗೋಧಿ ಪತ್ತೆ:‌ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಹೆಚ್. ರಂಗಾಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಆಹಾರಕ್ಕೆ ಸರ್ಕಾರದಿಂದ ವಿತರಿಸಲಾಗಿದ್ದ ಗೋಧಿಯನ್ನು ವಸತಿ ಶಾಲೆಯ ಅಧಿಕಾರಿಗಳು ಅಕ್ರಮವಾಗಿ ಹೂತು ಹಾಕಿದ ಗಂಭೀರ ಪ್ರಕರಣ ತನಿಖೆಯಲ್ಲಿ ಬಯಲಾಗಿದ್ದು ಮೂಟೆ ಮೂಟೆ ಗೋಧಿ ಚೀಲಗಳು ವಸತಿ ಶಾಲಾ ಆವರಣದಲ್ಲಿ ಹೂತು ಹಾಕಿರುವುದು ಪತ್ತೆಯಾಗಿರುತ್ತದೆ.

ಹೌದು .. ಜಿಲ್ಲಾ ಸಮನ್ವಯಾಧಿಕಾರಿ (DCO) ಅಜ್ಜಪ್ಪ ಅವರನ್ನು ತನಿಖಾಧಿಕಾರಿಯಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿರವರ ಆದೇಶದ ಮೇರೆಗೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಎಲ್ಲಾ ನಿಲಯ ಪಾಲಕರನ್ನು ವಿಚಾರಿಸಲಾಗಿ ಯಾರೂ ಸಹ ತಮ್ಮ ತಮ್ಮ ಅವಧಿಯಲ್ಲಿ ಯಾವುದೇ ಆಹಾರ ಪಧಾರ್ಥಗಳನ್ನು ಹೂತು ಹಾಕಿರುವುದಿಲ್ಲವೆಂದು ತಿಳಿಸಿದರು ಹಾಗೂ ತಮ್ಮ ತಮ್ಮ ಅವಧಿ ಮುಗಿದ ಮೇಲೆ ಎಲ್ಲಾ ದಾಸ್ತಾನುಗಳನ್ನು ಆಗಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿರುವ ಬಗ್ಗೆ ಮಾಹಿತಿ ನೀಡಿದ್ದರು.

ಆದರೆ ಹೂತು ಹಾಕಿರುವ ಬಗ್ಗೆ ದೂರು ಬಂದಿದ್ದರಿಂದ ಹಾಗೂ ದೂರುದಾರ ಹೂತುಹಾಕಲಾಗಿರುವ ಸ್ಥಳವನ್ನು ತೋರಿಸಿದ್ದರಿಂದ ಸ್ಥಳ ಪರಿಶೀಲನೆ ಮಾಡಿ ಆ ವಸತಿ ಶಾಲಾ ಪ್ರಾಂಶುಪಾಲರು, ನಿಲಯ ಪಾಲಕರು ಹಾಗೂ ಸಿಬ್ಬಂದಿಗಳಿಗೆ ದೂರುದಾರ ತೋರಿಸಿದ ಸ್ಥಳವನ್ನು ಮಾನವ ಸಂಪನ್ಮೂಲ ಅಥವಾ ಇಟಾಚಿ / ಜೆಸಿಬಿ ಯಂತ್ರದ ಮೂಲಕ ಅಗೆದು ಗೋಧಿ ಅಥವಾ ಇತರೆ ಆಹಾರ ಪದಾರ್ಥಗಳನ್ನು ಹೂತು ಹಾಕಿರುವ ಬಗ್ಗೆ ಸಮಗ್ರ ವರದಿ ನೀಡಲು ಸೂಚಿಸಿದರು.

ದೂರುದಾರ ಶಿವಮೂರ್ತಿ ಎಸ್ ನೀಡಿದ ಸುಳಿವಿನ ಮೇರೆಗೆ, ಹಾಗೂ ಜಿಲ್ಲಾ ಸಮನ್ವಯಾಧಿಕಾರಿಯವರ ಆದೇಶದ ಮೇರೆಗೆ ಪ್ರಾಂಶುಪಾಲರಾದ ಶೈಲಾ ರವರು ನಿಲಯ ಪಾಲಕರಾದ BM, ರವಿ, ಹಾಗೂ ವಸತಿ ಶಾಲಾ ಎಲ್ಲಾ ಸಿಬ್ಬಂದಿಗಳು ದೂರುದಾರನ ಸಮ್ಮುಖದಲ್ಲಿ ತೋರಿಸಿದ ಸ್ಥಳದಲ್ಲಿ ಇಟಾಚಿ ಮೂಲಕ ಉತ್ಖನನ ಕೈಗೊಳ್ಳಲಾಯಿತು. ಉತ್ಕನನ ಮಾಡುವಾಗ ಸುಮಾರು ಮೂರು – ನಾಲ್ಕು ಅಡಿ ಆಳದಲ್ಲಿ ಗೋಧಿ ತುಂಬಿರುವ ಸುಮಾರು 70 ರಿಂದ 80 ಚೀಲಗಳು ಪತ್ತೆಯಾಗಿದ್ದು ಮಕ್ಕಳಿಗೆ ಆಹಾರಕ್ಕಾಗಿ ಬಳಸಲು ಸರ್ಕಾರ ನೀಡಲಾಗಿದ್ದ ಗೋಧಿಯನ್ನು ಗುಂಡಿಯಲ್ಲಿ ಮುಚ್ಚಿು ಹಾಕಿರುವುದನ್ನು ಅಧಿಕಾರಿಗಳು ಹೊರತೆಗೆದರು. ಈ ಘಟನೆ ವಸತಿ ಶಾಲಾ ಆಡಳಿತದ ನಿರ್ಲಕ್ಷ್ಯ ಹಾಗೂ ದುರುದ್ದೇಶದ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟಿಕೊಂಡಿವೆ.

ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, “ವಿದ್ಯಾರ್ಥಿಗಳ ಅನ್ನವನ್ನೇ ಅಕ್ರಮವಾಗಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಒತ್ತಾಯ ಕೇಳಿಬಂದಿದೆ.
ಸಂಬಂಧಪಟ್ಟ ಅಧಿಕಾರಿಗಳು ತನಿಖೆಯನ್ನು ವೇಗಗೊಳಿಸಿದ್ದು, ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ.

ದೂರುದಾರ ಶಿವಮೂರ್ತಿ.ಎಸ್ ವಿಶ್ವಮಾನವ ಡಾ. ಬೀಮರಾವ್ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಅವರು, “ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಆಹಾರದಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ” ಹಾಗೂ ಸಮಾಜ ಕಲ್ಯಾಣ ಇಲಾಖೆ ಕ್ರೈಸ್ ವಸತಿ ಶಾಲೆಗಳಲ್ಲಿ SC / St. OBC – ಎಲ್ಲಾ ವರ್ಗದ ಮಕ್ಕಳೂ ವಿಧ್ಯಾಭ್ಯಾಸ ಮಾಡುತ್ತಿದ್ದು ಹೆಚ್ಚಿನದಾಗಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಮಕ್ಕಳು ಓದುತ್ತಿದ್ದು ಇವರಿಗೆ ಆಹಾರಕ್ಕಾಗಿ ನೀಡಿದ ಪದಾರ್ಥಗಳನ್ನು ಹೀಗೆ ಮಣ್ಣುಪಾಲು ಮಾಡಿರುವುದು ಸರ್ಕಾರಕ್ಕೆ – ಮಕ್ಕಳಿಗೆ-SC/St ಅನುಧಾನಕ್ಕೆ ಮಾಡಿದ ದ್ರೋಹ ಮತ್ತು ಅನ್ಯಾಯ ಇದನ್ನು ಎಲ್ಲರೂ ಸಹ ಖಂಡಿಸಬೇಕು ಹೀಗೆ ಮಾಡಿದ ಅಧಿಕಾರಿಗಳಿಗೆ ಹಾಗೂ ಇದಕ್ಕೆ ಸಹಕರಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಇಲ್ಲಿವರೆಗೂ ಪ್ರಯತ್ನಿಸಿದವರಿಗೂ ಸೂಕ್ತ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸುಮಾರು 2 ವರ್ಷಗಳ ಹಿಂದೆ ಬೇಸಿಗೆ ರಜೆಯಲ್ಲಿ ಹೂತು ಹಾಕಲಾಗಿದ್ದು ನಮಗೆ ಸಾರ್ವಜನಿಕರಿಂದ ಕೆಲ ತಿಂಗಳುಗಳ ನಂತರ ಮೌಖಿಕ ಮಾಹಿತಿ ತಿಳಿದು ಆಗ ವಸತಿ ಶಾಲೆಗೆ ಭೇಟಿ ನೀಡಿ ಆಗಿನ ಪ್ರಾಂಶುಪಾಲರನ್ನು ವಿಚಾರಿಸಿದಾಗ ಪ್ರಾಂಶುಪಾಲರು ಹಾಗೂ ಇನ್ನೋರ್ವ ಅಲ್ಲಿನ ಶಿಕ್ಷಕರು ಹೌದು ಗೋಧಿ ಹಾಳಾಗಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆಹಾರ ಇಲಾಖೆಯ ಅಧಿಕಾರಿಗಳ ಶಿಫಾರಸ್ಸು ಪಡೆದು ಹೂತು ಹಾಕಲಾಗಿದ್ದು ಅವುಗಳನ್ನು ನಮ್ಮ ಇಲಾಖೆಯವರಿಗೆ ಕಳುಹಿಸಲಾಗಿದೆ ಎಂದು ಮೌಖಿಕವಾಗಿ ತಪ್ಪು ಮಾಹಿತಿ ತಿಳಿಸಿ ಅಲ್ಲಿನ ನೌಕರನಿಗೆ ಹೂತು ಹಾಕಿರುವ ಜಾಗವನ್ನು ತೋರಿಸಲು ಇಬ್ಬರೂ ಅಧಿಕಾರಿಗಳು ಸೂಚಿಸಿದರು ಹಾಗೂ ಆ ನೌಕರ ಆಜಾಗವನ್ನು ತೋರಿಸಿದ್ದು,

ಇತ್ತೀಚೆಗೆ 2023 ರಿಂದ ಪ್ರಸ್ತುತ ವರ್ಷದವರೆಗೂ ಜಿಲ್ಲೆಯಲ್ಲಿನ ವಸತಿ ಶಾಲೆಗಳಲ್ಲಿ ಸರ್ಕಾರದಿಂದ ಮಕ್ಕಳಿಗೆ ಆಹಾರಕ್ಕಾಗಿ ಬಂದಂತಹ ಪದಾರ್ಥಗಳು ತಿನ್ನಲು ಯೋಗ್ಯವಿಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಆಹಾರ ಇಲಾಖೆಯವರಿಂದ ಶಿಫಾರಸ್ಸು ಪಡೆದು ಅಕ್ಕಿ, ಗೋಧಿ, ರಾಗಿ ಇತರೆಯನ್ನು ಊತು ಹಾಕಲಾಗಿರುವ ಬಗ್ಗೆ ಹಾಗೂ ಆಹಾರ ಇಲಾಖಾಧಿಕಾರಿಗಳಿಂದ ಅನುಮತಿ ಪಡೆದ ನಕಲನ್ನು ದೃಢೀಕರಿಸಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಆರ್.ಟಿ.ಐ. ನಡಿಯಲ್ಲಿ ಮಾಹಿತಿ ಕೇಳಿದಾಗ H. ರಂಗಾಪುರ ಕೆ.ಆರ್.ಸಿ.ಎಸ್.ನಿಂದ ನಾವುಗಳು ಯಾವುದೇ ಆಹಾರ ಪದಾರ್ಥಗಳನ್ನು RTI ನಲ್ಲಿ ಕೇಳಿರುವ ಸಾಲಿನಿಂದಲೂ ಹೂತು ಹಾಕಿರುವುದಿಲ್ಲ ಹಾಗೂ ಬಂದಂತಹ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಮಕ್ಕಳಿಗೆ ಬಳಸಿರುವುದಾಗಿ ಮಾಹಿತಿ ನೀಡಿದ್ದು ಕಳೆದ 2 ವರ್ಷಗಳಲ್ಲಿ ಹೂತು ಹಾಕಿದಾಗ ಅಧಿಕಾರಿಗಳು ಸುಳ್ಳು ಹೇಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ , ಸಿ.ಇ.ಓ ರವರಿಗೆ ಹಾಗೂ ಸಮಾಜ ಕಲ್ಯಾಣ ಉಪನಿದೇ೯ಶಕರಿಗೆ ದೂರು ನೀಡಿದ್ದರಿಂದ ಪ್ರಕರಣ ಹೊರಬಂದಿದ್ದು ತಪ್ಪಿತಸ್ಥ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಉತ್ಖನನ ಸಂದರ್ಭದಲ್ಲಿ ದಲಿತಸಂಘಟನೆ ಮುಖಂಡರಾದ ಪ್ರದೀಪ್ ಹೆಚ್. ಇ, ರಮೇಶ್ ಕರಕುಚ್ಚಿ, ನಿಲಯಪಾಲಕರಾದ B.M. ರವಿ ಶಿಕ್ಷಕರಾದ ಲಿಂಗರಾಜು, ಮಂಜುನಾಥ, ರಾಣಿ, ಶಶಿಕುಮಾರ್
ಶುಶೃಷಕಿ ಆಯಿಷಾ ಬೇಗಂ, ಕಾವ್ಯಾ, ಅನುಷಾ ಹಾಗೂ ಸಿಬ್ಬಂದಿ ವರ್ಗದವರು ವಸತಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!