Wednesday, March 25, 2026
Homeಆಧ್ಯಾತ್ಮಚಿಕ್ಕಮಗಳೂರು: 1831 ಎಕರೆ ದಾನದ ದಾಖಲೆ ಹಿಡಿದು ದತ್ತಪೀಠ ಹಿಂದೂಗಳದ್ದೇ : ವಿಎಚ್‌ ಪಿ ಆಗ್ರಹ

ಚಿಕ್ಕಮಗಳೂರು: 1831 ಎಕರೆ ದಾನದ ದಾಖಲೆ ಹಿಡಿದು ದತ್ತಪೀಠ ಹಿಂದೂಗಳದ್ದೇ : ವಿಎಚ್‌ ಪಿ ಆಗ್ರಹ

ಚಿಕ್ಕಮಗಳೂರು: ಕಳೆದ ಮೂರು ದಶಕಗಳಿಂದ ಚಿಕ್ಕಮಗಳೂರಿನ ದತ್ತಪೀಠದ ಉಮೇದುವಾರಿಕೆಗಾಗಿ ಹೋರಾಡ್ತಿದ್ದ ಹಿಂದೂ ಸಂಘಟನೆಗಳು ಇದೀಗ 1831 ಎಕರೆ ದಾನದ ದಾಖಲೆ ಹಿಡಿದು ದತ್ತಪೀಠ ಹಿಂದೂಗಳದ್ದೇ ಎನ್ನುತಿದ್ದಾರೆ.

ಈ ಮಧ್ಯೆ ದತ್ತಪೀಠದ ವಿರುದ್ಧ ಹಾಕಿದ್ದ ಎಲ್ಲಾ ಕೇಸ್‍ಗಳು ವಜಾಗೊಂಡಿದ್ದು ದತ್ತಪೀಠ ಮುಜರಾಯಿ ಸುಪರ್ದಿಗೆ ಬಂದಿದೆ. ಆದರೆ, ಮೂರು ವರ್ಷದ ಹಿಂದೆ ಬಿಜೆಪಿ ಸರ್ಕಾರ ನೇಮಿಸಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಅವಧಿ ಕೂಡ ಮುಗಿದಿದ್ದು, ಹೊಸ ಸಮಿತಿ ರಚಿಸದ ಸರ್ಕಾರ ಎಡಿಸಿಯವರನ್ನ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಆದರೆ, ಸಮಿತಿ ಸದಸ್ಯರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವ್ಯಕ್ಯತೆಯ ಜೊತೆ ಸ್ವಾಭಿಮಾನದ ಸಂಕೇತ ಕೂಡ ಹೌದು. ಹಾಗಾಗಿಯೇ, ಮೂರು ದಶಕಗಳಿಂದ ಎರಡೂ ಧರ್ಮದವರು ದತ್ತಪೀಠದ ಉಮೇದುವಾರಿಕೆಗೆ ಕಾನೂನಿನ ಒಳಗೂ-ಹೊರಗೂ ಹೋರಾಡ್ತಿದ್ದಾರೆ. ಈಗ ಹಿಂದೂ ಸಂಘಟನೆಗಳು ದತ್ತಪೀಠ ಸಂಪೂರ್ಣ ಹಿಂದೂಗಳದ್ದು.

ರಾಣಿ ಚೆನ್ನಮ್ಮ-ಮೈಸೂರು ಮಹಾರಾಜರು ಸಾವಿರಾರು ಎಕರೆ ಭೂಮಿಯನ್ನ ದತ್ತಪೀಠಕ್ಕೆ ದಾನವಾಗಿ ನೀಡಿದ್ರು. ಅದಕ್ಕೆ ಇನಾಂ ದತ್ತಾತ್ರೇಯ ಪೀಠ ಎಂದು ಹೆಸರು ಬಂದಿದ್ದು. ಆದ್ರೆ, ಸ್ವತಂತ್ರ ಬಂದ ಬಳಿಕ ಸರ್ಕಾರಗಳು ಬೇರೆಯವರಿಗೆ ಪರಭಾರೆ ಮಾಡಿದ್ರಿಂದ ಅದನ್ನ ಅವರು ಸ್ವಂತಕ್ಕೆ ಬಳಸಿಕೊಳ್ತಿದ್ದಾರೆ. ಸರ್ಕಾರ ದತ್ತಪೀಠದ ಭೂಮಿಯನ್ನ ದೇವಾಲಯಕ್ಕೆ ಬಿಡಿಸಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!