ಚಿಕ್ಕಮಗಳೂರು: ನಗರದ ಎಂ,ಇ,ಎಸ್ ಕಾಲೇಜ್ ವಿದ್ಯಾರ್ಥಿಗಳು ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಬರುವಾಗ ಮೂಗ್ತಿಹಳ್ಳಿ ಕೆರೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರು. ಅಪಘಾತದಲ್ಲಿ ವಿದ್ಯಾರ್ಥಿ ಮೋಹಿನ್(19) ಸ್ಥಳದಲ್ಲಿಸಾವನ್ನಪ್ಪಿದ್ದು ಐವರಿಗೆ ತೀವ್ರ ಗಾಯಗಳಾಗಿವೆ.
ರಿಹಾನ್,ಸತ್ಯಪಾಲ್,ಪೂರ್ಣ,ಶ್ರೇಯಸ್ ಮತ್ತು ರಘ ಜೊತೆಯಲ್ಲಿ ಬರಬೇಕಾದರೆ ಕಾರು ಅಪಘಾತದಲ್ಲಿ ಮೋಹಿನ್ ಸಾವಪ್ಪಿದರೆ ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಇವರೆಲ್ಲರೂ ಚಿಕ್ಕಮಗಳೂರಿನವರು ಎಂದು ತಿಳಿದುಬಂದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದವರು ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಕ್ರಿಕೆಟ್ ಆಡಲು ಮೂಡಿಗೆರೆಗೆ ತೆರಳಿದ್ದ ವಿದ್ಯಾರ್ಥಿಗಳು ಪಂದ್ಯ ಮುಗಿಸಿಕೊಂಡ ಬಳಿಕ ಕೊಟ್ಟಿಗೆಹಾರ ಸುತ್ತಮುತ್ತ ತಿರುಗಾಡಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
