ಚಿಕ್ಕಮಗಳೂರು: ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆಯನ್ನ ತರೀಕೆರೆ ತಾಲೂಕಿನ ಯರದಂಕಲು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ರವೀಂದ್ರ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಭದ್ರಾವತಿ ವಿಭಾಗ ಭದ್ರಾವತಿ ಅವರ ಮಾರ್ಗದರ್ಶನದಲ್ಲಿ ಹಾಗೂ ಉಮರ್ ಬಾದ್ ಷಹ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತರೀಕೆರೆ ಉಪ ವಿಭಾಗ ತರೀಕೆರೆ, ಆಸಿಫ್ ಅಹಮದ್ ವಲಯ ಅರಣ್ಯ ಅಧಿಕಾರಿಗಳು, ತರೀಕೆರೆ ವಲಯ ಇವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು
ಮುನ್ನಾವರ ಭಾಷಾ ಉಪ ವಲಯ ಅರಣ್ಯ ಅಧಿಕಾರಿಗಳು ಲಿಂಗದಹಳ್ಳಿ ಶಾಖೆ, ಅಕ್ಷಯ್ ಕುಮಾರ್ ಪಿ ಗಸ್ತು ಅರಣ್ಯ ಪಾಲಕ ಲಿಂಗದಹಳ್ಳಿ ಗಸ್ತು, ಮಹಾಲಿಂಗಪ್ಪ ಗಸ್ತು ಅರಣ್ಯ ಪಾಲಕ, ಕಾರ್ತಿಕ್, ಯಲ್ಲಪ್ಪ ಅರಣ್ಯ ವಿಕ್ಷಕ ಹಾಗೂ ಯರದಂಕಲು ಗ್ರಾಮಸ್ಥರ ಸಹಕಾರದೊಂದಿಗೆ ಯರದಂಕಲು ಗ್ರಾಮದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಯಿತು
