ಚಿಕ್ಕಮಗಳೂರು: ಬಿಡಾಡಿ ದನಗಳ ಉಪದ್ರವ ಉಂಟಾಗುತ್ತಿರುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಅಂಶಗಳ ಆದೇಶದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು.
ಬಿಡಾಡಿ ದನಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ದನಗಳ ಮಾಲೀಕರು ಯಾರಾದರೂ ಇದ್ದಲ್ಲಿ ತಮ್ಮ ದನಗಳನ್ನು 3 ದಿನದ ಒಳಗಾಗಿ ಹಿಡಿದು ರಸ್ತೆಗೆ ಬಿಡದೇ ತಮ್ಮ ಮನೆಯಲ್ಲೇ ಸಾಕಿಕೊಳ್ಳಬೇಕು. ತಪ್ಪಿದ್ದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ಹಿತ ದೃಷ್ಟಿಯಿಂದ ನಗರಸಭಾ ವತಿಯಿಂದ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು.
ದನಗಳ ಮಾಲೀಕರು ಈ ಸಮಯದಲ್ಲಿ ದನ ಹಿಡಿಯುವವರಿಗೆ ಅಡ್ಡಿ ಆತಂಕ ಉಂಟು ಮಾಡಿದಲ್ಲಿ ದನಗಳ ಮಾಲೀಕರುಗಳಿಗೆ ರೂ. 5000 ದವರೆಗೆ ದಂಡ ವಿಧಿಸುವುದಲ್ಲದೇ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
