ಚಿಕ್ಕಮಗಳೂರು : ಕೆಎಸ್ಆರ್ಟಿಸಿ ಚಿಕ್ಕಮಗಳೂರು ಡಿಪೋದಲ್ಲಿ ಚಾಲಕ/ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಶಶಿಕಾಂತ ಎಸ್. ಲಮಾಣಿ ಹಾಗೂ ಸರೋಜಾನಾಯ್ಕ್ ಅವರ ಪುತ್ರಿ ವಂದನಾ ಎಸ್ ನಾಯ್ಕ್ ಬೆಂಗಳೂರಿನ ಎಸಿಎಸ್ ಕಾಲೇಜಿನಲ್ಲಿ ಬಯೋ ಮೆಡಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಗೆ ತೆರಳುತ್ತಿದ್ದಾರೆ.

ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಪ್ರತಿಷ್ಟಿತ ವೆಸ್ಟರ್ನ್ ಯೂನಿವರ್ಸಿಟಿ ಆಫ್ ಆಸ್ಟ್ರೇಲಿಯಾ ನಲ್ಲಿ ʼಬಯೋ ಮೆಡಿಕಲ್ ನ್ಯೂರೋ ಸೈನ್ಸ್ʼ ವಿಷಯದಲ್ಲಿ ರಿಸರ್ಚ್ ಮಾಡಲು ತೆರಳುತ್ತಿರುವ ವಿದ್ಯಾರ್ಥಿನಿ ವಂದನಾ ತನ್ನ ಉನ್ನತ ವ್ಯಾಸಂಗನ್ನ ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಲಿ ಎಂದು ಕೆಎಸ್ಆರ್ಟಿಸಿಯ ಅಧಿಕಾರಿಗಳು, ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.
