ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ನೀರು ಹರಿಸಲು ಹೋದಾಗ ವಿದ್ಯುತ್ ಸ್ಪರ್ಶದಿಂದ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನಡೆದಿದೆ.

ಹೌದು .. ಪ್ರವೀಣ್ (25) ಮೃತ ಯುವಕನಾಗಿರುತ್ತಾನೆ. ಸೊಕ್ಕೆ ಪರಮೇಶಣ್ಣ ಅವರ ಮಗನಾಗಿರುತ್ತಾನೆ. ಬೇಸಿಗೆ ವೇಳೆಯಾಗಿದ್ದರಿಂದ ಬೋರ್ ವೆಲ್ ಮೋಟಾರ್ ಆನ್ ಮಾಡಿ ಅಡಿಕೆ ತೋಟಕ್ಕೆ ನೀರುಣಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ತೋಟಕ್ಕೆ ಹೋದಾಗ ಮಗ ತುಂಬಾ ಹೊತ್ತಾದರೂ ಬಾರದನ್ನು ಕಂಡು ಸ್ಥಳಕ್ಕೆ ಹೋಗಿ ನೋಡಿದಾಗ ಮಥರಪಟ್ಟಿದ್ದನ್ನು ಕಂಡಿದ್ದಾರೆ. ಮಗ ಅಕಾಲಿಕವಾಗಿ ಸಾವನ್ನಪ್ಪಿದ್ದನ್ನು ಕಂಡು ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ.

ಘಟನೆ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
