ಹಾಸನ ದುರಂತದಲ್ಲಿ 10 ಮಂದಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತರ ಕುಟುಂಬಸ್ಥರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ನನಗೆ ಈಗ 93 ವರ್ಷ, ನಿಮ್ಮ ನೋವು ಏನು ಅನ್ನೋದು ನನಗೆ ಅರ್ಥ ಆಗುತ್ತೆ.!. ಈ ನಡೆಯಬಾರದಿತ್ತು.ಆದರೆ ನಡೆದು ಹೋಗಿದೆ. ನೀವು ಧೈರ್ಯ ತಗೊಳ್ಳಿ ನಿಮ್ಮ ಜೊತೆ ನಾವೆಲ್ಲಾ ಇದ್ದೇವೆ.ಏನೇ ಸಮಸ್ಯೆಯಾದ್ರೂ ನಮ್ಮ ಗಮನಕ್ಕೆ ತನ್ನಿ ಎಂದು ನೊಂದ ಕುಟುಂಬಸ್ಥರಿಗೆ ಮಾಜಿ ಪ್ರಧಾನಿ ದೇವೇಗೌಡರ ಧೈರ್ಯ ಹೇಳಿದ್ದಾರೆ. ಇನ್ನು ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಮಗನನ್ನ ಕಳೆದುಕೊಂಡ ತಾಯಿಯ ಗೋಳಾಟ ಹೇಳ ತೀರದಾಗಿತ್ತು.
