ಹಾಸನ: ಇಂದು ಬೆಳಗ್ಗೆ ನಗರದ ಬೂವನಹಳ್ಳಿ ಸರ್ಕಲ್ ನಿಂದ – ಡೈರಿ ವೃತ್ತದ ಮದ್ಯ ಭಾಗದ ರಸ್ತೆ ಡಿವೈಡರ್ ಗಳಲ್ಲಿ ಬೆಳೆದ ಹುಲ್ಲು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರ್ಮಿಕರು ,
ಈ ವೇಳೆ ಟೊಯೋಟಾ ಶೋರೂಮ್ ಹತ್ತಿರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಸ್ವಚ್ಚಗೊಳಿಸುತ್ತಿದ್ದ ವ್ಯಕ್ತಿಗೆ ಅಪಘಾತ ತಪ್ಪಿಸಲು ಬ್ರೇಕ್ ಹಾಕಿದ ಬೆನ್ನಲ್ಲೇ ಹಿಂಬದಿಯ ಇನ್ನು ಮೂರು ಕಾರುಗಳು ಜಖಂಗೊಂಡವು .
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ನಗರ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
