ಮೂಡಿಗೆರೆ: ಹಾಸನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಶನಿವಾರ ಭೇಟಿ ಹಿನ್ನೆಲೆಯಲ್ಲಿ ನಾಳೆ ಮೂಡಿಗೆರೆ ಘಟಕದಿಂದ KSRTC ಬಸ್ ಸಂಚಾರ ಸ್ಥಗಿತಗೊಂಡಿದೆ.
ಹೌದು .. ಹಾಸನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಹಿನ್ನೆಲೆಯಲ್ಲಿ ಮೂಡಿಗೆರೆ ಘಟಕದಿಂದ 30 ಬಸ್ಸುಗಳ ಹಾಸನಕ್ಕೆ ವರ್ಗಾಯಿಸಿದ್ದರಿಂದ KSRTC ಬಸ್ ಸಂಚಾರ ಸ್ಥಗಿತಗೊಂಡಿದೆ
ಸಾರ್ವಜನಿಕರಿಗೆ ಖಾಸಗಿ ವಾಹನಗಳೇ ಗತಿಯಾಗಿದ್ದು ಮೂಡಿಗೆರೆ ಸಾರ್ವಜನಿಕರಿಗೆ ಪ್ರಯಾಣದ ಬಿಸಿ ಮುಟ್ಟಲಿದೆ. ಇಷ್ಟು ದಿನ ಫ್ರೀ ಬಸ್ ಎಂದು ತಿರುಗಾಡುತ್ತಿದ್ದವರಿಗೆ ದುಡ್ಡು ಕೊಟ್ಟು ಹೋಗುವುದಕ್ಕೆ ಭಾರೀ ಅಸಮಾಧಾನ ಉಂಟಾಗಿದ್ದು ರಾಜಕೀಯ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸ್ವತ್ತನ್ನ ಕಿತ್ತು ಕೊಳ್ಳುತ್ತಿದಿಯೇ ರಾಜ್ಯ ಸರ್ಕಾರ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
