Wednesday, March 25, 2026
Homeಕ್ರೈಮ್ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಅಧಿಕಾರ ಸ್ವೀಕಾರ!

ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಅಧಿಕಾರ ಸ್ವೀಕಾರ!

ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಚಿಕ್ಕಮಗಳೂರು SP ಕಚೇರಿಗೆ ಬಂದ ಜಿತೇಂದ್ರ ಕುಮಾರ್ ದಯಾಮ ಅವರನ್ನ ಪೊಲೀಸ್ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯ್ತು.

ಗುರುವಾರ ಸಂಜೆ ರಾಜ್ಯದೆಲ್ಲೆಡೆ ಕೆಲ IPS ಅಧಿಕಾರಿಗಳ ವರ್ಗಾವಣೆ ಆಗಿತ್ತು. ಈ ಹಿಂದೆ ಚಿಕ್ಕಮಗಳೂರು SP ಆಗಿ, ವಿಕ್ರಂ ಅಮಟೆ ಕಾರ್ಯ ನಿರ್ವಹಿಸುತ್ತಿದ್ರು. 2 ವರ್ಷ 4 ತಿಂಗಳುಗಳ ಕಾಲ ಕರ್ತವ್ಯ ವಿಕ್ರಂ ಅಮಟೆ ಅವರು ಚಿಕ್ಕಮಗಳೂರು ಪೊಲೀಸ್ ವರಿstaಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ರು.

ಇದೀಗ ಈ ಸ್ಥಾನಕ್ಕೆ ಜಿತೇಂದ್ರ ಕುಮಾರ್ ದಯಾಮ ಅವರು ಬಂದಿದ್ದು, ವಿಕ್ರಂ ಅಮಟೆ ಅವರು ಬೆಂಗಳೂರು ಪೂರ್ವ ವಿಭಾಗಕ್ಕೆ ಡಿಸಿಪಿ ಆಗಿ ನಿಯೋಜನೆಗೊಂಡಿದ್ದಾರೆ. ಇನ್ನೂ 2018 ಸಾಲಿನ IPS ಅಧಿಕಾರಿ ಆಗಿರೋ ಜಿತೇಂದ್ರ ಕುಮಾರ್ ದಯಾಮ ಅವರು ಈ ಹಿಂದೆ ANF SP ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ರು. ಅಲ್ಲದೇ ಧರ್ಮಸ್ಥಳ SIT ಪ್ರಕರಣದ ತಂಡದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!