ʼಕೊಪ್ಪ: ಅಭಿವೃದ್ಧಿ ಮಾಡಿ ಗೂಂಡಾಗಿರಿ ಬಿಡಿʼ ಎಂಬ ವೇದವಾಕ್ಯದೊಂದಿಗೆ ಬಿಜೆಪಿ ಪ್ರತಿಭಟನೆಯನ್ನು ನಾಳೆ ಕೊಪ್ಪ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಎಚ್ ಕೆ ದಿನೇಶ್ ಹೊಸೂರ್ ತಿಳಿಸಿದ್ದಾರೆ

ಹೌದು .. ಕಾಂಗ್ರೆಸ್ಸಿನ ಗೂಂಡಾ ಪ್ರವೃತ್ತಿ ಹಾಗೂ ಕ್ಷೇತ್ರದ ಅಭಿವೃದ್ಧಿ ಕುಂಠಿತ ವಿರೋಧಿಸಿ ಅಕ್ಟೋಬರ್ 19ರಂದು ಭಾನುವಾರ ಕೊಪ್ಪ ಬಸ್ ನಿಲ್ದಾಣದಲ್ಲಿ ಆವರಣದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದು ಪ್ರತಿಭಟನೆಯಲ್ಲಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷ ಎಚ್ ಕೆ ದಿನೇಶ್ ಹೊಸೂರ್ ತಿಳಿಸಿದ್ದಾರೆ
ಶುಕ್ರವಾರ ಬಾಳ ಗಡಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧಪಕ್ಷವಾದ ಬಿಜೆಪಿಯ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಮುಂದಾಗುತ್ತಿದೆ. ಕಾಂಗ್ರೆಸಿನ ಎಲ್ಲಾ ನಡೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ವೇಳೆ ಮುಖಂಡರಾದ ಎಸ್ ಎನ್ ರಾಮಸ್ವಾಮಿ, ಪುಣ್ಯಪಾಲ್, ಶೃಂಗೇರಿ ಮಂಡಲದ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
