Monday, February 9, 2026
Homeಜಿಲ್ಲಾಸುದ್ದಿಕೊಪ್ಪ: ಪ್ರೀತಿಯ ರಾಜಕಾರಣ ಮಾಡಿ ಎನ್ನುವ ಶಾಸಕರು ಸಂಸದರ ಅನುಪಸ್ಥಿತಿಯಲ್ಲಿ ಶಂಕುಸ್ಥಾಪನೆ ಮಾಡಿದ್ದು ಸರಿಯೇ?: ದಿನೇಶ್...

ಕೊಪ್ಪ: ಪ್ರೀತಿಯ ರಾಜಕಾರಣ ಮಾಡಿ ಎನ್ನುವ ಶಾಸಕರು ಸಂಸದರ ಅನುಪಸ್ಥಿತಿಯಲ್ಲಿ ಶಂಕುಸ್ಥಾಪನೆ ಮಾಡಿದ್ದು ಸರಿಯೇ?: ದಿನೇಶ್ ಹೊಸೂರು

ಕೊಪ್ಪ: ‘ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುವ ‘ಅಮೃತ್‌ 2.0` ಕಾಮಗಾರಿ
ಶಂಕುಸ್ಥಾಪನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅನುಪಸ್ಥಿತಿಯಲ್ಲಿ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ’ ಎಂದು ಕೊಪ್ಪ ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂ‌ರ್ ತಿಳಿಸಿದರು.

ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಶ್ವತ, ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಮೊದಲ ಹಂತದಲ್ಲಿ ಮಹಾನಗರ ಪಾಲಿಕೆ, ನಗರ ಸಭೆಗೆ ವ್ಯಾಪ್ತಿಯಲ್ಲಿ, ನಂತರ ಪುರಸಭೆ, ಪಟ್ಟಣ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ಮಾಡಲು ಕಾಂಗ್ರೆಸ್ ಬಿಟ್ಟಿಲ್ಲ. ಅಧಿಕಾರ ಕೇಂದ್ರೀಕರಣ ಮಾಡಿದೆ’ ಎಂದು ದೂರಿದರು.

ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ಕೊಟ್ಟಿರುವುದಕ್ಕೆ ಸ್ವಾಗತ. ಮಾಜಿ ಶಾಸಕ ಜೀವರಾಜ್ ಅವರು 11 ಎಕರೆ ಮಂಜೂರು ಮಾಡಿಸಿದ್ದರು. ಅವರು ಬುನಾದಿ ಹಾಕಿದ್ದ ಕೆಲಸವನ್ನೇ ಈಗಿನ ಶಾಸಕರು ಮುಂದುವರಿಸುತ್ತಿದ್ದಾರೆ. ಶಾಸಕ ರಾಜೇಗೌಡರು ತಾವು ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಕ್ಕುಪತ್ರ ಕೊಡಲು ಬಿಜೆಪಿ ಯಾವುದೇ ಕಾನೂನು ತಂದು ಅಡ್ಡಿ ಮಾಡಿಲ್ಲ, ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಯಪುರ ಆಸ್ಪತ್ರೆ ನಮ್ಮ ಸರ್ಕಾರ ಮಂಜೂರು ಮಾಡಿದೆ. ಜಯಪುರ, ವಸ್ತಾರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡುವಂತೆ ಶ್ರೀನಿವಾಸ್ ಪೂಜಾರಿ ಅವರು ಪ್ರಧಾನಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಪಟ್ಟಣದಲ್ಲಿ ವಸತಿ ರಹಿತರಿಗೆ ನಿವೇಶನ ಕೊಡಲು ಯಾಕೆ ಆಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕಡಿಮೆ ಇದ್ದಾರೆ ಎಂಬ ಕಾರಣಕ್ಕೆ ಹಕ್ಕುಪತ್ರ ಕೊಡುತ್ತಿಲ್ಲವೇ? ಪಂಚಾಯಿತಿ ಚುನಾವಣೆ ನಡೆಸಲು ಕಾಂಗ್ರೆಸ್‌ ಸಿದ್ಧವಿಲ್ಲ. ನಮ್ಮದು ಪ್ರೀತಿಯ ರಾಜಕಾರಣ ಎನ್ನುವ ಶಾಸಕರು ಮಹಾಬಲ ರಾವ್‌ಗೆ ಸಹಕಾರ ರತ್ನ ಪ್ರಶಸ್ತಿ ತಪ್ಪಿಸಿರುವುದು ಪ್ರೀತಿಯ ರಾಜಕಾರಣವೆ? ಎಂದು ಪ್ರಶ್ನಿಸಿದರು.

ಬಿಜೆಪಿ ಉಪಾಧ್ಯಕ್ಷ ಜಯಂತ್, ಅರುಣ್ ಶಿವಪುರ, ಕಾರ್ಯದರ್ಶಿ ಭಿಷೇಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪೂರ್ಣಚಂದ್ರ, ಕಿಶೋ‌ರ್ ಪೇಜಾವರ್, ರೇವಂತ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಇಸ್ಮಾಯಿಲ್, ಮುಖಂಡ ಶತಾನಿಕ್, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪದ್ಮಾವತಿ, ಲಲಿತಾ ಮತ್ತಿತರರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!