ಕೊಪ್ಪ: ಗೋವುಗಳನ್ನ ಅಕ್ರಮವಾಗಿ ಸಾಗಾಟ ಮಾಡ್ತಿದ್ದಾರೆ ಅಂತಾ ಆರೋಪಿಸಿ, ಕಾರನ್ನ ಚೇಸ್ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಕೊಪ್ಪದಿಂದ ಕುದುರೆಗುಂಡಿವರೆಗೂ ಭಜರಂಗದಳದ ಕಾರ್ಯಕರ್ತರು ಕಾರನ್ನ ಚೇಸ್ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.ಆದರೆ ಆ ಬಳಿಕ ಕಾರು ತಪ್ಪಿಸಿಕೊಂಡು ಹೋಗಿದೆ ಅಂತಾ ಆರೋಪ ಮಾಡಿದ್ದಾರೆ.
ಕೆಎ 18, ಎಂಎ 6372 ನಂಬರಿನ XUV ಕಾರಿನಲ್ಲಿ ದನ ತುಂಬಿಸಿಕೊಂಡು ಹೋಗಿರುವುದಾಗಿ ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಸಂಬAಧಪಟ್ಟವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳದೇ ಇದ್ರೆ, ನಾಳೆಯಿಂದ ಅಹೋರಾತ್ರಿ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಹೇಳಿಕೊಂಡಿದೆ.
