ಕೊಪ್ಪ: ಬಸರೀಕಟ್ಟೆ ಸುತ್ತ ಮುತ್ತಲಿನ ಬಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಖ್ಯರಸ್ತೆಗಳ ಚರಂಡಿಗಳ , ಮೋರಿಪೈಪುಗಳ ಸರಿಯಾದ ನಿರ್ವಾಹಣೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಸಾಗುತ್ತಿವೆ. ಜನ ರಸ್ತೆಗಳಲ್ಲಿ ಓಡಾಡುವುದಕ್ಕೂ ಕಷ್ಟವಾಗುತ್ತಿವೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಕಿಡಿ ಕಾರಿದ್ದಾರೆ.
ಹೌದು .. ಹೊನ್ನಗುಂಡಿ ಭಾಗದಲ್ಲಿ ನೀರು ನುಗ್ಗಿ ಅನೇಕ ಮನೆಗಳಿಗೆ ತೊಂದರೆಯಾಗುವ ಭೀತಿಯಲ್ಲಿವೆ ಕಳೆದ ಬಾರಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು ಇನ್ನೂ ಏನು ಅಗತ್ಯ ಕಾಮಗಾರಿಗಳು ಆಗಿಲ್ಲ ಈ ಭಾರಿ ಅಗತ್ಯ ನೀರು ಕಾಲುವೆಗಳು ಹಾಗೂ ಮೋರಿಗಳ ದುರಸ್ತಿ ಕಾರ್ಯ ಆಗದಿದ್ದಲ್ಲಿ ಇನಷ್ಟು ಅಪಾರ ಹಾನಿಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .
