ಮೂಡಿಗೆರೆ: ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ಯಲ್ಲಿ ಸುದೀರ್ಘ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಿರಗುಂದ ಪಂಚಾಯಿತಿಗೆ ವರ್ಗಾವಣೆಗೊಂಡ ಶ್ರೀಯುತ ಕೃಷ್ಣಪ್ಪ ಅವರನ್ನು ಬಣಕಲ್ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು.
ಗೌರವ ಸ್ವೀಕರಿಸಿ ಮುಖ್ಯ ಕಾರ್ಯ ನಿರ್ವಣಧಿಕಾರಿ ಕೃಷ್ಣಪ್ಪ ಮಾತನಾಡಿ ಈ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸಿದ್ದು ನನ್ನ ಸೌಭಾಗ್ಯ ಎಂದರು.. ಸ್ಥಳೀಯರ ಸಹಕಾರ ನನ್ನ ಜೇವನದಲ್ಲಿ ನಾನೆಂದು ಮರೆಯುವುದಿಲ್ಲ. ನಿಮ್ಮೆಲ್ಲರ ಸಹಕಾರ ಋಣಿಯಗಿರುವೆ ಎಂದರು.
ಇವರ ಕಾರ್ಯ ವೈಖರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಶ್ಲಾಘಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಕ್ಷಿತ್ ಬಡವನದಿಣ್ಣೆ. ಮಧು ಅತ್ತಿಗೆರೆ. ಸಮಾಜ ಸೇವಕ ಆರಿಫ್, ತಾರಾನಾಥ್, ಇರ್ಫಾನ್, ವಿನಯ್, ರತ್ನ,ಸುನಿತಾ, ಸಿರಾಜ್,
ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು
