Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಮೂಡಿಗೆರೆ : ಕರ್ತವ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಆಚರಣೆ!

ಮೂಡಿಗೆರೆ : ಕರ್ತವ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಆಚರಣೆ!

ಮೂಡಿಗೆರೆ: ತಾಲೂಕಿನ ದೀನಾ ದಯಾಳ್ ಉಪಾಧ್ಯಯ ಸಭಾಂಗಣದಲ್ಲಿ ಪತ್ರಿಕಾ ದಿನವನ್ನು ಆಚರಿಸಲಾಯಿತು.ಪತ್ರಿಕಾ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಸಾಮಾನ್ಯ ಜ್ಞಾನ ಅಭಿವೃದ್ಧಿ ನಿಟ್ಟಿನಲ್ಲಿ ರಸಪ್ರಶ್ನೆ ಹಾಗೂ ದೇಶ ಭಕ್ತಿಗೀತೆ ಸ್ಪರ್ಧೆ ಕಾರ್ಯಕ್ರಮದ ಜೊತೆಗೆ ಅನೇಕ ಆಟೋಟ ಸ್ಪರ್ಧೆ ಏರ್ಪಡಿಸಿದ್ದು.ಈ ಕಾರ್ಯಕ್ರಮದಲ್ಲಿ ಎಂಇಎಸ್, ನಳಂದ, ಬೆತನಿ, ಬಿಜಿಎಸ್, ನಜರತ್ ಶಾಲೆ ಬಣಕಲ್, ಸರ್ಕಾರಿ ಜೂನಿಯರ್ ಕಾಲೇಜ್, ಸರ್ಕಾರಿ ಬಾಲಿಕ ಪ್ರೌಢ ಶಾಲೆ ಮೊರಾರ್ಜಿ ಶಾಲೆ ಮಕ್ಕಳು ಸೇರಿದಂತೆ ಅನೇಕ ಶಾಲಾ ಮಕ್ಕಳು ಭಾಗವಹಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಪ್ರಸನ್ನ ಗೌಡಹಳ್ಳಿ ಅವರು, ಕೆಲ ಕಾರ್ಯಕ್ರಮಕ್ಕೆ ವರೆದಿಗಾರರಾಗಿ ಹೋಗುವುದು ವಾಡಿಕೆ ಆದರೆ ನಮ್ಮ ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರು ಸಾರ್ವಜನಿಕರಿಗೆ ಆಹ್ವಾನ ನೀಡಿ ಮಾಡುವುದು ವಿಶೇಷ ಎಂದರು.ಹಾಗೆ ಸಂಘಟನೆ ರಿಜಿಸ್ಟರ್ ಗಾಗಿ ಅಧ್ಯಕ್ಷ ಪ್ರಸನ್ನ ಕುಮಾರ್ ಕಾರ್ಯ ಶ್ಲಾಘನೀಯ ಹಾಗೆ ಸಂವಿಧಾನದ ನಾಲ್ಕನೇ ಅಂಗದಲ್ಲಿ ಪತ್ರಕರ್ತ ಕರ್ತವ್ಯ ಮಾಡುತ್ತಿದ್ದು ನಾವು ಮಾಡಿದ ಸುದ್ಧಿಗೆ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ನಮಗೆ ಸನ್ಮಾನ ಎಂದರು.

ಹಾಗೆ ಸಂಘಟನೆ ರಾಜ್ಯಾಧ್ಯಕ್ಷ ರಾಜಶೇಖರ್ ಮಾತನಾಡಿ, ಪತ್ರಿಕಾ ದಿನಾಚರಣೆಯ 180 ವರ್ಷಗಳ ಇತಿಹಾಸವಿದ್ದು ಇಲ್ಲಿ ಕೆಲಸ ಮಾಡಲು ಸೇವಾ ಮನೋಭಾವನೆ ಬಹಳ ಮುಖ್ಯ. ಅಂಗೈನಲ್ಲಿ ಅರಮನೆ ಇರುವ ಈ ಕಾಲದಲ್ಲಿ ಕ್ರಿಯಾಶೀಲವಾಗಿ ಮೂಡಿಗೆರೆ ಪತ್ರಕರ್ತರು ಸದಾ ಮುಂದಿರುತ್ತಾರೆ. ಗ್ರಾಮೀಣ ಪತ್ರಕರ್ತರಿಗೆ ಸೌಲಾಭಗಳನ್ನು ಸರ್ಕಾರ ಒದಗಿಸಬೇಕು. ಕುಟುಂಬದ ಭದ್ರತೆಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕೆಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದಾನಿಗಳಾದ ಮಂಚೇಗೌಡ ಮಾತನಾಡಿ, ಪತ್ರಕರ್ತರು ಸಾಧಕರೇ, ಇಂತಹ ಸಾಧಕರು ಸಮಾಜದಲ್ಲಿ ಸಾಧನೆಗೈದ ಅನೇಕರರಿಗೆ ಸನ್ಮಾನಿಸಿ ಗೌರವಿಸಿದ್ದು ನಿಜಕ್ಕೂ ಶ್ರೇಷ್ಠ ಕಾರ್ಯ. ಸಮಾಜದ ಅಂಕು ಡೊಂಕುಗಳನ್ನು ವರದಿ ಮಾಡಿ ಸಮಾಜಕ್ಕೆ ತಿಳಿಸುವ ನಿಮ್ಮ ಕಾರ್ಯಕ್ಜೆ ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಿಕಾ ವೃತ್ತಿ ಜೊತೆಗೆ ಕಲಾವಿದರು ನಮ್ಮ ಮೂಡಿಗೆರೆ ಪತ್ರಕರ್ತರಲ್ಲಿ ಕಾಣಬಹುದು ಎಂದರು.

ದಿಶಾ ಸಮಿತಿ ಅಧ್ಯಕ್ಷ ಮನೋಜ್ ಹಳೇಕೋಟೆ ಮಾತನಾಡಿ, ಭ್ರಷ್ಟಾಚಾರ ನಡೆದ ಜಾಗದಲ್ಲಿ ಪ್ರಶ್ನಿಸುವ ಕೆಲಸ ಮಾಡುವುದು ಪತ್ರಕರ್ತರು ಮಾತ್ರ. ಪತ್ರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜ ಕೆಡುಕು ಉಂಟು ಮಾಡುವರನ್ನು ಬೀದಿಗೆ ಎಳೆಯುವ ಶಕ್ತಿ ನಿಮ್ಮದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಸನ್ನ ಕುಮಾರ್, ದೇಶದಲ್ಲಿ ಹಲವು ದಿನಾಚರಣೆಗಳು ರೂಡಿಯಲ್ಲಿದ್ದು ಪತ್ರಿಕಾ ದಿನಾಚರಣೆ ಸರ್ಕಾರದ ಮಟ್ಟದಲ್ಲಿ ನಡೆಯಬೇಕು. ಹೊಸ ಸಂಘ ಹುಟ್ಟುಹಾಕಿ ಸಂಘಕ್ಕೆ ಅನೇಕ ಕಾರ್ಯಗಳು ನಡೆದಿದ್ದು ಈ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅಮೂಲ್ಯ ಎಂದರು. ಪತ್ರಕರ್ತರಿಗೆ ಸೌಲಭ್ಯದ ಕೊರತೆ ಇದ್ದು ಪತ್ರಕರ್ತರ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.

ತದನಂತರ ರಸ ಪ್ರಶ್ನೆ ಹಾಗೂ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸ್ಪರ್ಧೆಯ ಬಹುಮಾನಗಳನ್ನು ಅಶ್ವಿನಿ ಸಂತೋಷ್ ಕೊಡುಗೆ ನೀಡಿದರು. ಇದೆ ವೇಳೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ದೀಪಕ್ ದೊಡ್ಡಯ್ಯ, ಬಿಜೆಪಿ ಪಕ್ಷದ ರಘು ಜನ್ನಾಪುರ, ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ, ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ನಯನ ತಳವಾರ, ತನು ಕೊಟ್ಟಿಗೆಹಾರ, ಅಮರ್‌ ನಾಥ್,‌ ಆನಂದ್ ಕಣಚೂರು, ಸೋಮಣ್ಣ,ಗಣೇಶ್ ಮಗ್ಗಲಮಕ್ಕಿ ಸೇರಿದಂತೆ ಪೋಷಕರು, ಶಿಕ್ಷಕರು ಸಹ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!