ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿಯ ಹೊಸಕೆರೆ ಗ್ರಾಮದ ಸಾಗರ್ ಎಂಬುವರ ಮನೆಗೆ ಕಾಳಿಂಗ ಸರ್ಪ ಎಂಟ್ರಿ ಕೊಟ್ಟಿತ್ತು.
ಸುದ್ದಿ ತಿಳಿದ ಉರಗ ಪ್ರೇಮಿ ಆರೀಫ್, ಕಾಳಿಂಗನನ್ನ ಸೆರೆ ಹಿಡಿಯಲು ಮುಂದಾದ್ರು. ಈ ವೇಳೆ ಮನೆಯ ಗೋಡೆ ಏರಲು ಹೋದ ಕಾಳಿಂಗನ ಬೆನ್ನಟ್ಟಿದ್ದ ಆರೀಫ್ ನನ್ನ ಕಚ್ಚಲು ಕಾಳಿಂಗ ಮುಂದಾಯ್ತು. ಆಗ ಸ್ವಲ್ಪವೂ ವಿಚಲಿತರಾಗದೇ ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಸ್ನೇಕ್ ಆರೀಫ್ ಯಶಸ್ವಿಯಾದ್ರು.
ಕೊನೆಗೂ ಸೆರೆ ಹಿಡಿದ 8 ಅಡಿ ಉದ್ದದ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಸಿಬ್ಬಂದಿ ಎದುರು ಅರಣ್ಯಕ್ಕೆ ಬಿಡಲಾಯಿತು
