Saturday, August 2, 2025
!-- afp header code starts here -->
Homeಜಿಲ್ಲಾಸುದ್ದಿಎನ್‍ಆರ್‌ಪುರ: ಕಾಡಾನೆ ದಾಳಿಗೆ ಮೃತರಾದ ಸುಬ್ಬೇಗೌಡರ ಮನೆಗೆ ಸಂಸದರು ಭೇಟಿ, ಸಾಂತ್ವನ

ಎನ್‍ಆರ್‌ಪುರ: ಕಾಡಾನೆ ದಾಳಿಗೆ ಮೃತರಾದ ಸುಬ್ಬೇಗೌಡರ ಮನೆಗೆ ಸಂಸದರು ಭೇಟಿ, ಸಾಂತ್ವನ

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದಾಗಿ ಮೃತರಾದ ಜಾಗರ ಸುಬ್ಬೇಗೌಡ ಕುಟುಂಬವನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಕಾಡಾನೆ ದಾಳಿಯಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವರ ಗಮನಕ್ಕೆ ತಂದಿದ್ದು. ಕಾಡಾನೆ ದಾಳಿ ಸಂಪೂರ್ಣ ತಡೆ ಮಾಡುವ ಕಡೆಗೆ ರಾಜ್ಯ – ಕೇಂದ್ರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಜುಲೈ 27ರಂದು ಎನ್‍ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಸುಬ್ಬೆಗೌಡರ ಮೇಲೆ ಆನೆ ದಾಳಿ ಮಾಡಿ, ಕೊಂದು ಹಾಕಿತ್ತು.

ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎನ್.‌ ಜೀವರಾಜ್‌ ಕೂಡ ಜೊತೆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!