Saturday, February 14, 2026
Homeಜಿಲ್ಲಾಸುದ್ದಿಬಸರೀಕಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹುಟ್ಟು ಹಬ್ಬ ಆಚರಣೆ

ಬಸರೀಕಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹುಟ್ಟು ಹಬ್ಬ ಆಚರಣೆ

ಭಾರತವನ್ನು ವಿಶ್ವಗುರುವನ್ನಾಗಿಸಿ ಪ್ರಪಂಚದ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವಲ್ಲಿ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಮಹತ್ವದಾಗಿದೆ ಎಂದು ಬಸರೀಕಟ್ಟೆಯಲ್ಲಿ ನರೇಂದ್ರ ಮೋದಿಯವರ ಜನ್ಮ ದಿನದ ಸಂಭ್ರಮಾಚರಣೆಯ ವೇಳೆ ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಹೇಳಿದರು .

ರಾಷ್ಟ್ರದ ಭದ್ರತೆಯನ್ನು ಉನ್ನತಿಕರಿಸಿ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆರಿಸಿದ ಕೀರ್ತಿ ಜೊತೆಗೆ ಮೇಕ್ ಇನ್ ಇಂಡಿಯಾದ ಮೂಲಕ ತಂತ್ರಜ್ಞಾನ ಮತ್ತು ಉದ್ಯೋಗ ಯೋಜನೆಗಳ ಅಭಿವೃದ್ಧಿ , ಯುವಜನತೆಗೆ ಅನೇಕ ಉದ್ಯೋಗ ಯೋಜನೆಗಳು , ರೈತ ವರ್ಗ , ಶೈಕ್ಷಣಿಕ ಯೋಜನೆ , ನಗರಾಭಿವೃದ್ದಿ ಹೀಗೆ ಅನೇಕ ಜನಪರ ಯೋಜನೆಯ ಶಿಲ್ಪಿ ಹಾಗೂ ನಮ್ಮ ಭಾರತ ದೇಶದ ಹೆಮ್ಮೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದರು.

ಬಸರೀಕಟ್ಟೆ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಮೋದಿಯವರ ಹೆಸರಿನಲ್ಲಿ ಪಂಚಾಮೃತ ಅಭಿಷೇಕ,ಪವಮಾನ ಅಭಿಷೇಕ , ವಿಷ್ಣು ಸಹಸ್ರನಾಮ ಪರಾಯಣ ಮಹಾಪೂಜೆ ಯನ್ನು ವೇದ ಬ್ರಹ್ಮ ಚೇತನ್ಯ ರವರು ನೇರವೇರಿಸಿ ಹರಸಿದರು .

ಬಸರೀಕಟ್ಟೆ ವೃತ್ತದಲ್ಲಿ ಪಟಾಕಿ ಸಿಡಿಸಿ , ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧರ್ಮರಾಜ್ , ಸೀತೆಗೌಡ್ರು , ಬೂತ್ ಕಮಿಟಿ ಅಧ್ಯಕ್ಷ ಪಧ್ಮನಾಭ , ಸುದರ್ಶನ ಶೆಟ್ಟಿ , ಕೃಷ್ಣ , ಸುರೇಂದ್ರ , ಸಂತೋಷ್ , ಅನಿಲ , ಶೇಷಯ್ಯ ಭರಕನಘಟ್ಟ , ಅದ್ರಾಮ್ , ಸುರೇಶ್ , ಪಯ್ಯಣ್ಣ, ಆಟೋ ಬಳಗದವರು. ಮೇರುತಿ ಗೋ ಪ್ರೇಮಿ ಬಳಗದ ಅಧ್ಯಕ್ಷ ಸುಧೀಂದ್ರ ಮಲ್ಲಂಪಾಲ್ ಹಾಗೂ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!