Tuesday, February 10, 2026
Homeಕ್ರೈಮ್ಸಕಲೇಶಪುರ: ಉಡ ಬೇಟೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಸಕಲೇಶಪುರ: ಉಡ ಬೇಟೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು


ಸಕಲೇಶಪುರ: ವಲಯ, ಮಾರನಹಳ್ಳಿ ಶಾಖೆಯ ಕಾಡುಮನೆ ಎಸ್ಟೇಟ್ ಸರ್ವೆ ನಂಬರ್–02 ರ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಗಸ್ತು ತಿರುಗುವಾಗ ಅಕ್ರಮವಾಗಿ ಉಡವನ್ನು ಬೇಟೆಯಾಡಿ ಮಾಂಸವನ್ನಾಗಿ ಪರ್ವರ್ತಿಸುತ್ತಿರುವುದು ಪತ್ತೆಯಾಗಿದೆ.


ಆರೋಪಿಗಳಾದ ಬಾಬು P A s/o ಎಲಿಯಾಸ್ P V (ಶಿರಾಡಿ ಗ್ರಾಮ, ಕಡಬ ತಾಲೂಕು, ದ.ಕ. ಜಿಲ್ಲೆ) & ಬಿನೋಯಿ s/o ಪ್ರಭಾಕರ್ (ಉಪ್ಸ್ಕೋಡು, ಇಡುಕ್ಕಿ ತಾಲೂಕು ಕೇರಳ) ಹಾಗೂ ಸಿಂಗಲ್ ಬ್ಯಾರೆಲ್ ಗನ್ ಅನ್ನು ಇಲಾಖೆ ಪರ ವಶಮಾಡಿಸಿಕೊಂಡು ಅರಣ್ಯ ಪ್ರಕರಣ ದಾಖಲಾಗಿದೆ


ಇನ್ನುಳಿದ ಐದು ಆರೋಪಿಗಳಾದ ಜೋಶ್(ಶಿರಾಡಿ ಗ್ರಾಮ), ಜೇಮ್ಸ್(ಉದಾನೆ), ಅಭಿಲಾಷ್(ಶಿರಾಡಿ), ಪ್ರದೀಪ್(ಉದಾನೆ), ಬಾಬುಟ (ಎಂಜಿರ) ಇವರು ತಲೆಮರೆಸಿಕೊಂಡಿರುತ್ತಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ಎಚ್.ಆರ್.ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್, ಅರ್ಜುನ್ ಎಸ್ ಆರ್, ಗಸ್ತು ಅರಣ್ಯ ಪಾಲಕರದ ಉಮೇಶ್ ಎಸ್,ದೇವರಾಜು ಅರಣ್ಯ ವೀಕ್ಷಕರಾದ ಲೋಕೇಶ್ ಬಿ.ಎಂ., RRT ಅರಣ್ಯ ಸಿಬ್ಬಂದಿಗಳಾದ ಕರುಣಾಕರ ಕೆ.ಎಸ್., ಹೇಮಂತ್ ಕುಮಾರ್, ದಿವಾಕರ ಜಿ.ವಿ., ನಿಕ್ಷಿತ್ ಹೆಚ್ ಡಿ ಹಾಗೂ ಚಾಲಕ ಆಶ್ರಯ್ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!