ಸಕಲೇಶಪುರ: ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಬೃಹತ್ ಪಥ ಸಂಚಾಲನ ನಡೆಸಲಾಯಿತು.
ವಿಶ್ವದ ಶಾಂತಿ ಮತ್ತು ಸಮೃದ್ದಿಗಾಗಿ ಸಮರಸ ಹಾಗೂ ಸಂಘಟಿತ ಹಿಂದೂ ಸಮಾಜದ ನಿರ್ಮಾಣದ ಗುರಿಯೊಂದಿಗೆ ಸಂಘದ ಶತಾಭ್ದಿಯ ಸಂಕಲ್ಪದ ಅಂಗವಾಗಿ ಹಮ್ಮಿಕೊಂಡಿದ್ದ ಪಥಸಂಚಲನ ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಒಂದು ತಂಡ ಪಥಸಂಚಾಲನ ಆರಂಬಿಸಿದರೆ ಮತ್ತೊಂದು ತಂಡ ಲಯನ್ಸ್ ಕ್ಲಬ್ ನಿಂದ ಪಥ ಸಂಚಾಲನ ಆರಂಬಿಸಿದ್ದು ಎರಡು ತಂಡ ಏಕಕಾಲಕ್ಕೆ ಹಳೆಬಸ್ ನಿಲ್ದಾಣ ಸಮೀಪ ವಿಲೀನಗೊಂಡು ಮುಖ್ಯ ರಸ್ತೆಯಲ್ಲಿ ಎಂಟು ಪಥದ ಸಂಚಾಲನ ಶ್ರೀನಿವಾಸ್ ಕಲ್ಯಾಣ ಮಂಟಪದವರಗೆ ನಡೆಸಲಾಯಿತು.
ಕಲ್ಯಾಣ ಮಂಟಪದ ಅವರಣದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಕುಟುಂಬ,ಪರಿಸರ ಹಾಗೂ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಬಗ್ಗೆ ತಿಳಿಸಲಾಯಿತು. ಪಥ ಸಂಚಾಲನದ ಅಂಗವಾಗಿ ಪಟ್ಟಣದಲ್ಲಿ ಬಿಗಿ ಪೋಲಿಸ್ ಬಂದೂಬಸ್ತ್ ಆಳವಡಿಸಲಾಗಿತ್ತು.
