ಕೊಪ್ಪ: ಬಸರೀಕಟ್ಟೆ ಸಮೀಪದ ಸೋಮೇಶ್ವರ ಖಾನ್ ಬಳಿ ಮುಂಜಾನೆ ಟೆಂಪೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆಲಕಾಲ ಬಸರೀಕಟ್ಟೆಯಿಂದ ಹೇರೂರು ಸಂಪರ್ಕಿಸುವ ರಸ್ತೆ ಬಂದಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಸರೀಕಟ್ಟೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಮಣಿಕಂಠನ್ ಕಂದಸ್ವಾಮಿ , ಪ್ರವೀಣ್ , ಕೃಷ್ಣ , ಶರವಣ , ಸಂತೋಷ್ , ಕಾರ್ತಿಕ್ , ಸಂತೋಷ್ , ಮಣಿ ಸ್ಥಳೀಯರಾದ ಶರಣ್ ಡಿ ಕುನಃ , ಕುವೆಲ್ಹೋ ರವರ ಸಹಕಾರ ದಿಂದ ಒಂದು ಬದಿಯ ರಸ್ತೆಯ ಮಣ್ಣು ಅಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಂತರ ಸ್ಕ್ರೈನ್ ಮೂಲಕ ವಾಹನವನ್ನು ಮೇಲೆ ಎತ್ತಿಲಾಗಿದ್ದು, ವಾಹನದಲ್ಲಿ ಇದ್ದ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
