ಜಯಕರ್ನಾಟಕ ಸಂಘಟನೆ ತರೀಕೆರೆ ತಾಲ್ಲೂಕು ಘಟಕದಿಂದ ಮಹಿಳಾ ದಿನಾಚರಣೆ ಮಾಡಲಾಯಿತು,
ಮಹಿಳೆಯರು ಸಬಲೀಕರಣದ ಮೂಲಕ ಹೊಸ ಇತಿಹಾಸ ಬರೆಯುತ್ತಿದಾರೆ

ಸಮಾನತೆಯೇ ಸಮಾಜದ ಶಕ್ತಿ, ಮಹಿಳೆಯರ ಸಾಧನೆಯೇ ದೇಶದ ಕೀರ್ತಿ. ಶಿಕ್ಷಣ, ವಿಜ್ಞಾನ, ಕ್ರೀಡೆ, ಆಡಳಿತ, ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿ, ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿರುವ ನಮ್ಮ ಮಹಿಳೆಯರ ಸಾಧನೆಗಳು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಸಾಧನೆಯ ಶಿಖರ ಏರುತ್ತಿರುವ ಎಲ್ಲಾ ಮಹಿಳಾ ಮಣಿಯರಿಗೆ ಗೌರವ ನೀಡುವ ಈ ಕಾರ್ಯಕ್ರಮದ ನೇತೃತ್ವವನ್ನು ಮಹಿಳಾ ಘಟಕದ ಅಧ್ಯಕ್ಷರಾದ ರೂಪರವರು ವಹಿಸಿದರು ಕಾರ್ಯಕ್ರಮದ ಉದ್ಗಾಟನೆಯನ್ನು ನಿವೃತ ಶಿಕ್ಷಕಿಯಾದ ಕಮಲಮ್ಮನವರು ನೇರವೆರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಜಗದೀಶ ಟಿ ಎನ್ ರವರು ವಹಿಸಿದರು. ಈ ಕಾರ್ಯಕ್ರಮದ ಉಪಸ್ಥಿತಿ ರೈತ ಸಂಘದ ಅಧ್ಯಕ್ಷರಾದ ದರ್ಶನ್ ರವರು ಜಯಕರ್ನಾಟಕದ ತಾಲ್ಲೂಕು ಕಾರ್ಯದರ್ಶಿಗಳಾದ ದೇವರಾಜ್ ರವರು ನಮ್ಮ ಸ್ನೇಹಿತರು ಪತ್ರಕರ್ತರಾದ ಲಿಂಗರಾಜುರವರು ಮತ್ತು ಸಂಘಟನೆಯ ಮುಖಂಡರಾದ ರವಿ_ಶಾಂತಿಪುರ ರವರು #ಆನಂದರವರು,ಸಲ್ಮಾನ್ ,ಪಾರ್ವತಿರವರು ನಿರೂಪಣೆ ಮಾಡಿದರು .
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಗೌರವದ ಮೂಲಕ ಸನ್ಮಾನಿಸಲಾಯಿತು ಮತ್ತು ಸಂಘನೆಯ ಮಹಿಳಾ ಕಾರ್ಯಕರ್ತರು ಭಾಗವಹಿಸಿದರು.
