Monday, August 4, 2025
!-- afp header code starts here -->
Homeಕ್ರೈಮ್ಕಾಫಿ ತೋಟಕ್ಕೆ ಶಿಕಾರಿಗೆ ಹೋದವನೇ ಶಿಕಾರಿಯಾದ: ಹಂದಿ ಬೇಟೆಗೆ ಹೋಗಿ ಯುವಕ ಸಾವು

ಕಾಫಿ ತೋಟಕ್ಕೆ ಶಿಕಾರಿಗೆ ಹೋದವನೇ ಶಿಕಾರಿಯಾದ: ಹಂದಿ ಬೇಟೆಗೆ ಹೋಗಿ ಯುವಕ ಸಾವು

ಚಿಕ್ಕಮಗಳೂರು ಜಿಲ್ಲೆಯ ಉಳುವಾಗಿಲು ಗ್ರಾಮದ ಕಾಫಿತೋಟದಲ್ಲಿ ಶಿಕಾರಿಗೆ ತೆರಳಿದ್ದ ಯುವಕನೊಬ್ಬ ತಾನೇ ಶಿಕಾರಿಯಾಗಿರೋ ಘಟನೆ ನಡೆದಿದೆ. ರಾತ್ರಿ ಹಂದಿ ಬೇಟೆಗೆ ಅಂತ ಹೋಗಿದ್ದ 33 ವರ್ಷದ ಸಂಜು ಆಕಸ್ಮಿಕವಾಗಿ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಮೇ.17 ರ ರಾತ್ರಿ ನಡೆದಿದೆ ಎನ್ನಲಾಗಿದೆ. ಕೆರೆಮಕ್ಕಿ ಗ್ರಾಮದ 33 ವರ್ಷದ ಸಂಜು ಮೃತ ಯುವಕ ಎಂದು ಗುರುತಿಸಲಾಗಿದೆ.

ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪು , ಹಂದಿಯನ್ನು ಕಂಡ ತಕ್ಷಣ ಗುರಿ ಇಟ್ಟಿದ್ದಾರೆ. ಆದರೆ ಈ ವೇಳೆ ಹಾರಿಸಿದ ಗುಂಡು ಮಿಸ್ ಆಗಿ ಸಂಜು ಎದೆ ಭಾಗಕ್ಕೆ ತಗುಲಿದೆ . ಪರಿಣಾಮವಾಗಿ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆಯನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!